Advertisement

ವಿಜಯಪುರ ಜಿ.ಪಂ. ಕಾಂಗ್ರೆಸ್ ಸದಸ್ಯರಿಗೆ ಭದ್ರತೆ ಕೋರಿ ಪ್ರಾದೇಶಿಕ ಆಯುಕ್ತರಿಗೆ ಪತ್ರ

03:54 PM Jun 30, 2020 | keerthan |

ವಿಜಯಪುರ: ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನ ಚುನಾವಣೆ ಹಿನ್ನಲೆ ಕಾಂಗ್ರೆಸ್ ಸದಸ್ಯರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಜಿಲ್ಲೆಯ ಕಾಂಗ್ರೆಸ್ ಶಾಸಕರು ಜಂಟಿಯಾಗಿ ಚುನಾವಣಾ ಅಧಿಕಾರಿ ಆಗಿರುವ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಪತ್ರ ಸಲ್ಲಿಸಿದ್ದಾರೆ.

Advertisement

ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ ಬಿ ಪಾಟೀಲ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಇಂಡಿ ಯಶವಂತರಾಯಗೌಡ ಪಾಟೀಲ, ಎಂಎಲ್ ಸಿ ಗಳಾದ ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ ಇವರು ಜಂಟಿಯಾಗಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಸದಸ್ಯರಿಗೆ ಜೀವ ಭಯವಿದ್ದು, ಭದ್ರತೆ ಒದಗಿಸಬೇಕು. ಚುನಾವಣೆ ಸಮಯದಲ್ಲಿ ನಮ್ಮ ಸದಸ್ಯರ ಮೇಲೆ ಹಲ್ಲೆಯಾಗುವ ಸಂಭವವಿದೆ. ಹೀಗಾಗಿ ಸದಸ್ಯರು ತಂಗಿರುವ ವಿಜಯಪುರ ನಗರದ ಲೀಗ್ರ್ಯಾಂಡಿ ಹೊಟೇಲ್ ನಿಂದ ಚುನಾವಣಾ ಸ್ಥಳಕ್ಕೆ ತೆರಳಲು ಹಾಗೂ ಅಲ್ಲಿಂದ ಹೊಟೇಲ್ ಗೆ ಮರಳುವವರೆಗೂ ಭದ್ರತೆ ನೀಡಬೇಕು ಎಂದು ಜಂಟಿ ಮನವಿಯಲ್ಲಿ ಕೋರಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿ, ಎಸ್ ಪಿ ಅವರಿಗೂ ಮನವಿ ರವಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next