Advertisement

ಸರ್ಕಾರಿ ಕಚೇರಿ ಸೂಚನಾ ಫಲಕದಲ್ಲಿ ಸಕಾಲ ಮಾಹಿತಿ ಕಡ್ದಾಯ

03:09 PM Jan 29, 2020 | Naveen |

ವಿಜಯಪುರ: ಸಕಾಲ ಅ ಧಿನಿಯಮ 2011ರ ಪ್ರಕಾರ ಸರಿಯಾದ ಸಮಯಕ್ಕೆ ಮಾಹಿತಿ ಪಡೆದುಕೊಳ್ಳುವುದು ಒಂದು ಹಕ್ಕಾಗಿದ್ದು ಅದರಿಂದ ಸಾರ್ವಜನಿಕರಿಗೆ ಸಕಾಲ ಯೋಜನೆ ಬಗ್ಗೆ ಮಾಹಿತಿ ನೀಡಲು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಕಾಲಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಡ್ಡಾಯವಾಗಿ ಹಾಕಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ| ಔದ್ರಾಮ್‌ ಹೇಳಿದರು.

Advertisement

ಜಿಲ್ಲಾಡಳಿತ ಮತ್ತು ಜಿಪಂ ಸಂಯುಕ್ತಾಶ್ರಯದಲ್ಲಿ ಜಿಪಂ ಸಭಾಭವನದಲ್ಲಿ ನಡೆದ ಸಕಾಲ ಯೋಜನೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ, ಸಾರ್ವಜನಿಕರ ಹಣ ಮತ್ತು ಸಮಯದ ಉಳಿತಾಯ, ಜವಾಬ್ದಾರಿ ಸೇವೆಗಳ ತ್ವರಿತ ವಿತರಣೆಗಾಗಿ ಸಕಾಲ ಯೋಜನೆಯನ್ನು ಜಾರಿ ಮಾಡಲಾಗಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿ ಅದನ್ನು ನಮೂದಿಸಬೇಕು ಎಂದರು.

ಸಕಾಲ ಒಟ್ಟು ಮೂರು ಹಂತದಲ್ಲಿ ಕಾರ್ಯ ನಿರ್ವಹಿಸುತ್ತದೆ, ಹೆಸರಿಸಲಾದ ಅಧಿಕಾರಿ, ಸಕ್ಷಮ ಅಧಿಕಾರಿ ನಂತರದಲ್ಲಿ ಮೆಲ್ಮನವಿಯನ್ನು ಹಾಕಬಹುದು. ಸರಿಯಾದ ಸಮಯಕ್ಕೆ ಮಾಹಿತಿ ನೀಡದಿದ್ದಲ್ಲಿ ಹೆಸರಿಸಲಾದ ಅ ಧಿಕಾರಿಯನ್ನು ದಂಡಿಸಲಾಗಿತ್ತದೆ. ಸಕಾಲ ಯೋಜನೆಯಲ್ಲಿ ಜಿಲ್ಲೆಯಲ್ಲಿ ಯಾವ ಅಧಿಕಾರಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೋ ಅವರಿಗೆ ಜಿಲ್ಲಮಟ್ಟದಲ್ಲಿ ಗುರುತಿಸಿ ಜಿಲ್ಲಾಧಿಕಾರಿಗಳಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

2020-21ನೇ ಸಾಲಿನ ಜನಗಣತಿ ಕಾರ್ಯವು 2 ಹಂತದಲ್ಲಿ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಸಂಬಂದಪಟ್ಟ ಅಧಿಕಾರಿಗಳು ಸಿಎಂಎಂಎಸ್‌ (ಸೆನ್ಸ್‌ಸ ಮ್ಯಾನೆಜ್‌ಮೆಂಟ್‌ ಮಾನಿಟರಿ ಸಿಸ್ಟಂ) ಪೋರ್ಟಲ್‌ ನಲ್ಲಿ ಕ್ಷೇತ್ರವಾರು ವಿಭಾಗ ಮತ್ತು ಉಪ ವಿಭಾಗಗಳನ್ನುರಚಿಸಿ ಮಾಹಿತಿ ನೀಡಬೇಕು ಎಂದು ಸಾಂಖ್ಯೀಕ ಅಧಿಕಾರಿ ಗಂಗಾಧರ ಕುಲಕರ್ಣಿ ಹೇಳಿದರು.

ಜನಗಣತಿ ಪೂರ್ವಭಾವಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜನಗಣತಿಗೆ ಸಂಬಂಧಿ ಸಿದಂತೆ 3,389 ಗಣತಿದಾರರು ಹಾಗೂ 564 ಗಣತಿದಾರರ ಮೆಲ್ವಿಚಾರಕರಾಗಿ ನೇಮಕ ಮಾಡಿಕೊಂಡಿದ್ದು ಪ್ರತಿಯೊಬ್ಬರು ತಮ್ಮ ಕಾರ್ಯವ್ಯಾಪ್ತಿ ಹಳೆಯ ಜನಗಣತಿಯನ್ನು ಆಧರಿಸಿ ಹೊಸ ವಿಭಾಗಗಳ ಸೆರ್ಪಡೆ ಮಾಡಿ ಸಂಪೂರ್ಣ ಮಾಹಿತಿ ನೀಡಬೇಕು ಎಂದರು.

Advertisement

ಇದೇ ಮೊದಲ ಬಾರಿಗೆ ಜನಗಣತಿಯಲ್ಲಿ ಮೊಬೈಲ್‌ ಆ್ಯಪ್‌ ತಾಂತ್ರಿಕತೆ ಬಳಸಲಾಗುತ್ತಿದೆ. ಜೊತೆಗೆ ಒಎಂಆರ್‌ ಹಾಳೆಯ ಪಟ್ಟಿ ನೀಡಲಾಗುತ್ತದೆ. ದೆಹಲಿ, ಪಟ್ನಾ ಹಾಗೂ ಬೆಂಗಳೂರಿನ ಕಚೇರಿಗಳಲ್ಲಿ ಮಾಹಿತಿ ಸಂಗ್ರಹವಾಗಲಿದ್ದು ನೆಟ್‌ವರ್ಕ್‌ ಇಲ್ಲದ ಸ್ಥಳದಲ್ಲಿಯೂ ಮೊಬೈಲ್‌ ಆ್ಯಪ್‌ನಲ್ಲಿ ಗಣತಿ ಕಾರ್ಯ ಮಾಡಬಹುದಾಗಿದೆ. ತದ ನಂತರ ನೆಟ್‌ವರ್ಕ್‌ ಬಂದತಕ್ಷಣ ನೇರವಾಗಿ ಅವುಗಳು ಮೂರು ಕಚೇರಿಗಳ ಸ್ಟೋರ್‌ ಆಗಲಿವೆ ಎಂದರು.

ಜನಗಣತಿಯಿಂದ ವೈಯಕ್ತಿಕ ಮಾಹಿತಿಗಳಿಗೆ ಯಾವುದೇ ಧಕ್ಕೆಯಾಗದೆ ಭದ್ರವಾಗಿ ಇರುವಂತೆ ತಾಂತ್ರಿಕತೆಯನ್ನು ಬಲಪಡಿಸಲಾಗಿದೆ. ಜನಗಣತಿಯಲ್ಲಿ ಪಾರದರ್ಶಕತೆ ಹಾಗೂ ವಸ್ತುನಿಷ್ಠ ಅಂಕಿ ಅಂಶ ಒದಗಿಸಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿಗಳಾಗಿದ್ದು ಅವರ ಮಾರ್ಗದರ್ಶನದಲ್ಲಿ ಜನಗಣತಿ ಅಧ್ಯಯನ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಡಿಐಒ ಹಾಗೂ ಎನ್‌ ಐಸಿ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ತಹಶೀಲ್ದಾರ್‌ ಮೋಹನಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳಿಗೆ ರಾಜ್ಯದ ಹಾಗೂ ರಾಷ್ಟ್ರದ ಗಣ್ಯವ್ಯಕ್ತಿಗಳು ಆಗಮಿಸಿದಾಗ ಜಿಲ್ಲೆಯ ಗಡಿಭಾಗದಲ್ಲಿ ಸ್ವಾಗತಿಸುವುದು. ಆಮಂತ್ರಣ ಪತ್ರಿಕೆಗಳಲ್ಲಿ ಮತ್ತು ಸಭಾಂಗಣದಲ್ಲಿ ಸರ್ಕಾರಿ ಶಿಷ್ಠಾಚಾರದಂತೆ ಗೌರವಿಸುವುದು, ಎಲ್ಲ ಇಲಾಖೆ ಕರ್ತವ್ಯವಾಗಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ ಸರ್ಕಾರಿ ಶಿಷ್ಠಾಚಾರ ಕಡ್ಡಾಯವಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next