Advertisement

ಪ್ರಿಯಾಂಕಾ ವಾದ್ರಾ ಬಂಧನ ವಿರೋಧಿಸಿ ಕೈ ಪ್ರತಿಭಟನೆ

01:21 PM Jul 21, 2019 | Team Udayavani |

ವಿಜಯಪುರ: ಉತ್ತರ ಪ್ರದೇಶದ ಸೋನಭದ್ರ ಘೋರವಾಲ್ ಗ್ರಾಮದಲ್ಲಿ ಕೊಲೆಗೀಡಾಗಿರುವ ವ್ಯಕ್ತಿಗಳ ಅವಲಂಬಿತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ತೆರಳಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರನ್ನು ಬಂಧಿಸಿರುವ ಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಲಾಯಿತು.

Advertisement

ಶನಿವಾರ ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಶಾಸಕ ವಿಠuಲ ಕಟಕದೊಂಡ ಮಾತನಾಡಿ, ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಘೋರವಾಲ್ ಗ್ರಾಮದಲ್ಲಿ ಜಮೀನಿನ ವಿವಾದದ ಜಗಳದಲ್ಲಿ 10 ಜನ ಧಾರುಣವಾಗಿ ಕೊಲೆಯಾಗಿದ್ದು ಹಾಗೂ 28 ಜನ ತೀವ್ರ ಗಾಯಗೊಂಡಿರು ವಿಷಯ ತಿಳದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಂಕಾ ವಾದ್ರಾ ಅವರು ಸಾಂತ್ವನ ಹೇಳಲು ತೆರಳುತ್ತಿದ್ದರು. ಇದನ್ನು ಅರಿತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಿಯಾಂಕಾ ಅವರನ್ನು ಬಂಧಿಸುವಂತೆ ನಿರ್ದೇಶನ ನೀಡಿರುವುದು ಖಂಡನೀಯ ಎಂದರು.

ಉತ್ತರ ಪ್ರದೇಶ ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿವೆ. ಆಡಳಿತ ನಡೆಸುವ ಪಕ್ಷದಷ್ಟೆ ಹೊಣೆ ಹಾಗೂ ಜವಾಬ್ದಾರಿ ವಿಪಕ್ಷಗಳಿಗೂ ಇರುತ್ತದೆ. ಇದಕ್ಕಾಗಿಯೇ ಕಾಂಗ್ರೆಸ್‌ ಪಕ್ಷದ ನಾಯಕಿ ಪ್ರಿಯಾಂಕಾ ಸಂಕಷ್ಟದಲ್ಲಿರುವ ಜನರ ಬಳಿಗೆ ಸಾಂತ್ವನ ಹೇಳಲು ತೆರಳುತ್ತಿದ್ದರು. ದೇಶದಲ್ಲಿ ಜನಪರ ಕೆಲಸಕ್ಕೆ ಕಾಂಗ್ರೆಸ್‌ ಮುಂದಾದರೂ ಬಿಜೆಪಿ ಸರ್ಕಾರ ಪ್ರತಿಪಕ್ಷವನ್ನು ಹತ್ತಿಕ್ಕುತ್ತಿದೆ. ಪ್ರಜಾಪ್ರಭುತ್ವದ ಈ ರಾಷ್ಟ್ರದಲ್ಲಿ ಹಿಟ್ಲರ್‌ನ ರೀತಿ ಈ ಆಡಳಿತ ಬಹಳ ದಿವಸ ನಡೆಯುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಮಹಾದೇವಿ ಗೋಕಾಕ, ಇಲಿಯಾಸ್‌ ಬೋರಾಮಣಿ, ಚಾಂದಸಾಬ ಗಡಗಲಾವ, ಜಮೀರ್‌ಅಹ್ಮದ್‌ ಭಕ್ಷಿ, ಸಾಹೇಬಗೌಡ ಬಿರಾದಾರ, ಈರಣ್ಣ ಪಟ್ಟಣಶೆಟ್ಟಿ, ಸಾಹೇಬಗೌಡ ಬಿರಾದಾರ, ಅಬ್ದುಲ್ ಖಾದರ್‌ ಖಾದಿಮ, ಆರ್‌.ಕೆ. ಜವನರ, ದತ್ತಾತ್ರೇಯ ಆಲಮೇಲಕರ, ಮಹ್ಮದ್‌ ಹನೀಫ್‌ ಮಕಾನದಾರ, ಡಾ| ಗಂಗಾಧರ ಸಂಬಣ್ಣಿ, ವಸಂತ ಹೊನಮೊಡೆ, ಇರ್ಫಾನ್‌ ಶೇಖ್‌, ವಿಜಯಕುಮಾರ ಘಾಟಗೆ, ಪೀರಪ್ಪ ನಡುವಿನಮನಿ, ಬಿ.ಎಸ್‌. ಬ್ಯಾಳಿ, ಹಾಜಿಲಾಲ್ ದಳವಾಯಿ, ಮಲ್ಲು ತೊರವಿ, ಶರಣಪ್ಪ ಯಕ್ಕುಂಡಿ, ಲಕ್ಷ್ಮೀ ದೇಸಾಯಿ, ಜಯಶ್ರೀ ಭಾರತಿ, ಮಂಜುಳಾ ಗಾಯಕವಾಡ, ಸಂಗಮ್ಮ ಹೂಗಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next