Advertisement

Vijayapura: ಸಮಾಧಿಗೆ ನೀರು ತುಂಬಿಸಿ ಮಳೆಗಾಗಿ ವಿಶೇಷ ಪ್ರಾರ್ಥನೆ !

02:50 PM Jul 15, 2024 | Kavyashree |

ವಿಜಯಪುರ: ಬಿತ್ತನೆಯ ಬಳಿಕ ಸುರಿಯದ ಮುಂಗಾರು ಸಮೃದ್ಧ ಮಳೆಗಾಗಿ ಜಿಲ್ಲೆಯ ಈ ಹಳ್ಳಿಯಲ್ಲಿ ಸಮಾಧಿಗೆ ರಂದ್ರ ಕೊರೆದು ನೀರು ತುಂಬಿಸಿ ವಿಚಿತ್ರ ಆಚರಣೆ ಮಾಡಿ ಗಮನ ಸೆಳೆದಿದ್ದಾರೆ.

Advertisement

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಸ್ಮಶಾನದಲ್ಲಿ ಮಳೆಗಾಗಿ ಈ ವಿಶೇಷ ಆಚರಣೆ ಮಾಡಲಾಗಿದೆ.

ವಾಗೀಶ ಹಿರೇಮಠ ನೇತೃತ್ವದಲ್ಲಿ ಟ್ಯಾಂಕರ್ ಮೂಲಕ ಸಮಾಧಿಯೊಳಗೆ ನೀರು ಹಾಕಿ ಪ್ರಾರ್ಥನೆ ಸಲ್ಲಿಸಲಾಗಿದೆ.

ಶವ ಹೂತಿದ್ದ ಸಮಾಧಿಗೆ ರಂದ್ರ ಕೊರೆದು ಟ್ಯಾಂಕರ್ ಮೂಲಕ ಸಮಾಧಿಯೊಳಗೆ ನೀರು ತುಂಬಿಸಿದ್ದಾರೆ.

Advertisement

ಗ್ರಾಮಸ್ಥರಲ್ಲಿ ಸಮಾಧಿಯೊಳಗೆ ನೀರು ಹಾಕಿದರೆ ಮಳೆ ಆಗುತ್ತದೆ ಎಂಬ ನಂಬಿಕೆ ಇದೆ. ಕೆಲ ವರ್ಷಗಳಿಂದ ಈ ಪದ್ದತಿ ಆಚರಣೆ ಮಾಡಿಕೊಂಡು ಬಂದಿರುವ ಗ್ರಾಮಸ್ಥರು ಶವ ಹೂತಿದ್ದ ಸಮಾಧಿಯೊಳಗೆ ನೀರು ಹಾಕಿದಾಗ ಮಳೆಯಾದ ಉದಾಹರಣೆ ಇದೆ ಎನ್ನುತ್ತಾರೆ.

ಹೀಗಾಗಿ ಸೋಮವಾರ ಶವ ಹೂತಿದ್ದ ಸಮಾಧಿಯೊಳಗೆ ನೀರು ಹಾಕಿರುವ ಗ್ರಾಮಸ್ಥರು ಈ ವಿಶೇಷ ಆಚರಣೆಯಲ್ಲಿ ಪಾಲ್ಗೊಂಡು ಉತ್ತಮ ಮಳೆಯಾಗಿ ಬೆಳೆಗಳು ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next