Advertisement

Kottihegara: ಸಿಡಿಲು ಬಡಿದು ಮನೆಗೆ ಹಾನಿ, ತಪ್ಪಿದ ದುರಂತ

10:30 PM Aug 21, 2024 | Team Udayavani |

ಕೊಟ್ಟಿಗೆಹಾರ: ಬಾಳೂರು ಹೋಬಳಿ ಮಾಳಿಗನಾಡು ಗ್ರಾಮದ ಸೀತು ಎಂಬುವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಗೆ ಹಾನಿಯಾಗಿದೆ. ಮನೆಯ ಹೆಂಚುಗಳು ಸೇರಿದಂತೆ ಬಾಗಿಲು ಸುಟ್ಟ ಸ್ಥಿತಿಯಲ್ಲಿದೆ. ಮನೆಯೊಳಗಿನ ವಸ್ತುಗಳಿಗೂ ಸಹ ಹಾನಿಯಾಗಿದೆ. ಸಿಡಿಲು ಬಡಿದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಪ್ರಾಣಾಪಾಯ ಸಂಭವಿಸಿಲ್ಲ ಮನೆಯವರು ಕೆಲಸಕ್ಕೆ ಹೋಗಿದ್ದರಿಂದ ದೊಡ್ಡ ದುರಂತ ಒಂದು ತಪ್ಪಿದಂತಾಗಿದೆ.

Advertisement

ಕೊಟ್ಟಿಗೆಹಾರ ಸೇರಿದಂತೆ ಚಾರ್ಮಡಿ ಘಾಡಿ, ರಾಣಿಝರಿ ಭಾಗದಲ್ಲಿ ಬುಧವಾರ ಬಾರಿಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಚಾರ್ಮಾಡಿ ಘಾಟಿಯಲ್ಲಿ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆಯವರೆಗೆ `ಧಾರಾಕಾರ ಮಳೆ ಸುರಿದ ಹಿನ್ನೆಲೆ ವಾಹನ ಸಂಚಾರರು ಪರಿತಪಿಸುವಂತಾಯಿತು. ಕಳೆದ ಮೂರು ದಿನಗಳಿಂದ `ಧಾರಾಕಾರ ಮಳೆಯಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಪುತ್ತೂರು ಉಪ ವಿಭಾಗಅಧಿಕಾರಿಗಳು ರಾಣಿಝರಿ ಸಮೀಪ ಭಾರಿ ಮಳೆಯಾಗುತ್ತಿರುವುದರಿಂದ ಭೂಮಿಕುಸಿತವಾಗುವ ಸಂಭವವಿದೆ ಎಂದು ಚಿಕ್ಕಮಗಳೂರು ಉಪವಿಭಗಾಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆ ನಿಡುವಾಳೆ ವೃತ್ತದ ಗ್ರಾಮ ಲೆಕ್ಕಾಧಿಕಾರಿಗಳಾದ ಮಹೇಶ ಬುಧವಾರ ಸ್ಥಳ ಪರಿಶೀಲನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next