Advertisement

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

01:10 PM Apr 19, 2024 | keerthan |

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ಸಿಡಿಲಿನ ಹೊಡೆತಕ್ಕೆ ಓರ್ವ ವ್ಯಕ್ತಿ ಗಾಯಗೊಂಡು, ಎರಡು ಎಮ್ಮೆ, ಒಂದು ಆಕಳು ಸೇರಿದಂತೆ ಮೂವರು ಜಾನುವಾರು ಮೃತಪಟ್ಟಿವೆ.

Advertisement

ಬಬಲೇಶ್ವರ ತಹಶೀಲ್ದಾರರು ಶುಕ್ರವಾರ ಜಿಲ್ಲಾಡಳಿತಕ್ಕೆ ನೀಡಿರುವ ವರದಿಯ ಪ್ರಕಾರ ತಾಲೂಕಿನ ಸಂಗಾಪುರ ಎಸ್.ಎಚ್. ಗ್ರಾಮದ ಲೋಕೇಶ ಜಾನೋಜಿ ಎಂಬ 18 ವರ್ಷದ ಯುವಕ ಗಾಯಗೊಂಡಿದ್ದಾನೆ.

ಗುರುವಾರ ಸಂಜೆ 6-30ಕ್ಕೆ ಸಿಡಿಲು ಬಡಿದು ಗಾಯಗೊಂಡಿದ್ದ ಲೋಕೇಶನನ್ನು ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಸಿಡಿಲು ಬಡಿದು ಇದೇ ತಾಲೂಕಿನ ಶೇಗುಣಸಿ ಗ್ರಾಮದ ರೈತ ಚನ್ನಪ್ಪ ಕಟಗೇರಿ ಇವರಿಗೆ ಸೇರಿದ ಎಮ್ಮೆ ಹಾಗೂ ಮಮದಾಪೂರ ಹೋಬಳಿ ವ್ಯಾಪ್ತಿಯ ಮಂಗಳೂರು ಗ್ರಾಮದಲ್ಲಿ ಪ್ರಕಾಶ ಹಾದಿಮನಿ ಇವರಿಗೆ ಸೇರಿದ ಆಕಳು ಮೃತಪಟ್ಟಿವೆ.

ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದಲ್ಲಿ ಸಿಡಿಲಿಗೆ ಎಮ್ಮೆ ಬಲಿಯಾಗಿದ್ದರೆ, ಇದೇ ತಾಲೂಕಿನ ಬರಟಗಿ ತಾಂಡಾ-2 ರಲ್ಲಿ ಮನೆಗಳ ಮೇಲ್ಛಾವಣಿಗೆ ಹೊದಿಸಿದ್ದ ತಗಡು ಹಾರಿಹೋಗಿದ್ದು, ಜನರಿಗೆ ಸಮಸ್ಯೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next