Advertisement

ವಿಜಯಪುರದಲ್ಲಿ ಪದೇ ಪದೇ ಭೂಕಂಪನ : ಇಂದು ತಜ್ಞರ ತಂಡ ಅಗಮನದ ನಿರೀಕ್ಷೆ

10:27 AM Aug 26, 2022 | Team Udayavani |

ವಿಜಯಪುರ : ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನ ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಇಂದು (ಶುಕ್ರವಾರ) ಭೂಗರ್ಭ ತಜ್ಞರು ವಿಜಯಪುರಕ್ಕೆ ಭೇಟಿ ನೀಡಲಿದ್ದಾರೆ.

Advertisement

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ವಿ.ಬಿ. ದಾನಮ್ಮನವರ, ಇಬ್ಬರು ತಜ್ಞರು ಉಕ್ಕಲಿ, ಬರಟಗಿ, ಕನ್ನೂರ ಸೇರಿದಂತೆ ಭೂಕಂಪನ ಸಂಭವಿಸಿರುವ ವಿವಿಧ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಜಿಲ್ಲೆಗೆ ಅಧ್ಯಯನಕ್ಕೆ ಆಗಮಿಸಲಿರುವ ಭೂಗರ್ಭ ತಜ್ಞರು ಭೂಮಿ ಕಂಪನ ಪತ್ತೆಗಾಗಿ ಸುಧಾರಿತ ಯಂತ್ರಗಳನ್ನೂ ತರಲಿದ್ದಾರೆ. ಇದರಿಂದ ಭೂಮಿ ಕಂಪನಕ್ಕೆ ನೈಜ ಕಾರಣ ತಿಳಿದು ಬರಲಿದೆ ಎಂದರು.

ತಜ್ಞರ ಅಧ್ಯಯನದ ಬಳಿಕ ವಿಜಯಪುರ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕಂಪನಕ್ಕೆ ನಿಖರ ಮಾಹಿತಿ ತಿಳಿದು ಬರಲಿದೆ ಎಂದು ವಿವರಿಸಿದರು.

ಇದನ್ನೂ ಓದಿ : ಪ.ಪಂ ಅಧಿಕಾರಿಗಳ ವೈಫಲ್ಯ ; ಹರಿಯುತ್ತಿರುವ ನೀರಿನಲ್ಲೇ ಪೌರಕಾರ್ಮಿಕನಿಂದ ಕಸ ವಿಲೇವಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next