Advertisement
ಜಿಲ್ಲಾ ಕೇಂದ್ರ ವಿಜಯಪುರದಲ್ಲಿ ಮಗಳ ಶಸ್ತ್ರ ಚಿಕಿತ್ಸೆ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗಲು ಜಿಲ್ಲೆಯ ಗ್ರಾಮೀಣ ಭಾಗದಿಂದ ಮಹಿಳೆ ನಗರಕ್ಕೆ ಬಂದಿದ್ದಳು. ಮಹಿಳೆ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಆರೋಪಿ ಅಶೋಕ ಶರಣಪ್ಪ ನಾಯ್ಕೋಡಿ ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿದಾಗ ಆಸ್ಪತ್ರೆಗೆ ಆಟೋ ಹತ್ತಿ ಹೋಗಲು ಮುಂದಾಗಿದ್ದಾಗಿ ತಿಳಿಸಿದ್ದಾಳೆ.
Related Articles
Advertisement
ವಿಚಾರಣೆ ನಡೆಸಿದ ವಿಜಯಪುರ 4ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಧ್ವೇಶ ಡಬೇರ, ದ ಸಾಕ್ಷಿ ಪುರಾವೆಗಳನ್ನು ಪರಿಗಣಿಸಿ ಐಪಿಸಿ 376 ನೇ ಕಲಂ ಅಡಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ , 50 ಸಾವಿರ ರೂ. ದಂಡವನ್ನು ಹಾಗೂ ಐಪಿಸಿ 392 ಕಲಂ ಅಪರಾಧಕ್ಕೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.ಸರ್ಕಾರದ ಪರವಾಗಿ 4ನೇ ಅಧಿಕ ಸರ್ಕಾರಿ ಅಭಿಯೋಜಕರಾದ ವಿ.ಜಿ.ಮಾಮನಿ ತಮ್ಮ ವಾದ ಮಂಡಿಸಿದ್ದರು.