Advertisement

ವಿಜಯಪುರ : ಬಬಲೇಶ್ವರ ತಾಲೂಕಿನ ಹಳ್ಳಿಗಳಲ್ಲಿ ಚಿರತೆ ಪ್ರತ್ಯಕ್ಷ! ಜನರಲ್ಲಿ ಆತಂಕ

11:30 AM May 27, 2020 | sudhir |

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ವಿವಿಧ ಹಳ್ಳಿಗಳಲ್ಲಿ ಚಿರತೆ ಪ್ರತ್ಯಕ್ಷವಾದ ವರದಿಯಾಗಿದೆ.

Advertisement

ಪ್ರತ್ಯಕ್ಷದರ್ಶಿ ಪ್ರಶಾಂತ ದೇಸಾಯಿ ಪ್ರಕಾರ, ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ, ಸುತಗುಂಡಿ ಪುನರ್ವಸತಿ ಕೇಂದ್ರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಈ ಗ್ರಾಮಗಳ ರೈತರಿಗೆ ಸೇರಿದ ಎಮ್ಮೆ, ಎರಡು ಮೇಕೆ ಮೇಲೆ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿಯಿಂದ ಜಾನುವಾರುಗಳು ಚೀರಾಟ ಆರಂಭಿಸಿದ್ದನ್ನು ಕೇಳಿ ಜನರು ಕೂಗಾಡತೊಡಗಿದ್ದಾರೆ. ಜನರ ಕೂಗು ಕೇಳಿದ ಕೂಡಲೇ ಚಿರತೆ ಕಬ್ಬಿನ ಜಮೀನಿನಲ್ಲಿ ಪರಾರಿಯಾಗಿದೆ.

ಕೂಡಲೇ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು , ಮಮದಾಪುರ ವಲಯ ಅರಣ್ಯಾಧಿಕಾರಿ ಪ್ರಭು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ಈ ಮಧ್ಯೆ ಬಬಲೇಶ್ವರ ತಾಲೂಕಿನ ಹಳ್ಳಿಗಳಲ್ಲಿ ಕಾಣಿಸಿಕೊಂಡದ್ದು ಚಿರತೆಯಲ್ಲ ಹೈನಾ ಎಂದು ಅಂದಾಜಿಸಿದ್ದಾರೆ. ಅರಣ್ಯ ಅಧಿಕಾರಿಗಳ ಕಾರ್ಯಾಚರಣೆಯ ಬಳಿಕವಷ್ಟೇ ಚಿರತೆಯೋ, ಚಿರತೆಯಂತೆ ಕಾಣುವ ಕತ್ತೆಕಿರುಬ (ಹೈನಾ) ಪ್ರಾಣಿಯೇ ಎಂದು ಸ್ಪಷ್ಟವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next