Advertisement

Vijayapura:ಸರಕಾರಿ ಪ್ರಥಮ ದರ್ಜೆ ಅತಿಥಿ ಉಪನ್ಯಾಸಕಿಯರಿಂದ ಲಟ್ಟಣಿಗೆ ಚಳವಳಿ

10:54 PM Dec 18, 2023 | Team Udayavani |

ವಿಜಯಪುರ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಸೇವೆ ಖಾಯಂಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ಸೋಮವಾರ 26ನೇ ದಿನಕ್ಕೆ ಕಾಲಿರಿಸಿದೆ. ಈ ಮಧ್ಯೆ ಉಪನ್ಯಾಸಕಿಯರು ಲಟ್ಟಣಿಗೆ ಚಳವಳಿ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.

Advertisement

ಸೇವೇ ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಹಿ ತರಗತಿ ಬಹಿಷ್ಕರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿರುವ ಅತಿಥಿ ಉಪನ್ಯಾಸಕಿಯರು ಲಟ್ಟಣಿಗೆ ಚಳುವಳಿ ಮೂಲಕ ಅಕ್ರೋಶ ವ್ಯಕ್ತಪಡಿಸಿದರು.

ಕಳೆದ 15-20 ವರ್ಷಗಳಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸರಕಾರ ಅವರ ಸೇವೆ ಖಾಯಂಗೊಳಿಸಿ ಸೇವ ಭದ್ರತೆ ನೀಡಬೇಕೆಂದು ಮುಷ್ಕರ ನಡೆಸುತ್ತಾ ಬಂದಿದ್ದಾರೆ. ಸರಕಾರದ ಮಾತ್ರ ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆ ವಿಷಯದಲ್ಲಿ ಮಾತ್ರ ನಿರ್ಲಕ್ಷ ಮಾಡುತ್ತಲೇ ಬರುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಅತಿಥಿ ಉಪನ್ಯಾಕರ ಸಂಘದ ಡಾ. ಆನಂದ ಕುಲಕಣಿ, ಸುರೇಶ ಡಬ್ಬಿ, ಆರ್.ಎಲ್.ಕಡೇಮನಿ, ಡಾ.ರೇಣುಕಾ ಹೆಬ್ಬಾಳ, ಡಾ. ಡಿ.ಬಿ. ಕುಲಕರ್ಣಿ, ಶ್ರೀಶೈಲ ಹೆಬ್ಬಿ, ಡಾ.ಆರ್.ಕೆ. ತೇಲಿ, ಮಹೇಶ ಕಲ್ಲೂರ, ಶಿಆನಂದ ಸಿಂಹಾಸನಮಠ, ಲೀಲಾ ಲಕ್ಕಣ್ಣವರ, ಡಾ. ಅಶೋಕ ಬಿರಾದಾರ, ಡಾ. ಸುರೇಸ ಬಿರಾದಾರ, ಡಾ.ಎ.ಬಿ. ಬಬಲಿ, ಜಿ.ಆರ್.ರಾಠೋಡ, ಜಯಶ್ರೀ ಸಾಲಿಮಠ, ಆರ್.ಬಿ. ನಾಗರಡ್ಡಿ, ಎಸ್.ಐ. ಯಂಭತ್ತನಾಳ, ಎಸ್.ಬಿ. ಪೂಜಾರಿ. ಆರ್.ಜಿ.ಕಳ್ಳಿ, ವಿಜಯಲಕ್ಷ್ಮೀ ಪಾಟೀಲ, ಎಸ್.ಎಚ್.ಮಹಾನಂದ, ತೇಜಸ್ವೀನಿ ಕೊರೆಗೊಳ, ಮಂಜುಳಾ ಭಾವಿಕಟ್ಟಿ, ಎಸ್.ಎಂ.ಹಡಪದ, ಆರ್.ಸಿ.ದೈಗೊಂಡ, ರಮೇಶ ಬಗಲಿ, ಕಾಶಿನಾಥ ಜಾಧವ, ಶಿಲ್ಪಾ ಉಕ್ಕಲಿ, ಆರ್.ಬಿ. ಮುದೇಬಿಹಾಳ, ರೂಪಾ ರುದ್ರಾಕ್ಷಿ, ಎಸ್.ಬಿ.ಬಿರಾದಾರ, ಬನದೇವಿ ಮಮದಾಪೂರ, ಸುರೇಸ ಕರಿಕಲ, ಎಂ.ಆರ್.ಪಾಟೀಲ, ಎಂ.ಎಸ್.ಖಾಕಂಡಕಿ, ಅರುಣ ರಾಠೋಡ, ಕವಿತಾ ಪಾಟೀಲ, ಶೋಭಾ ತುಳಜಣ್ಣವರ, ರೂಪಾ ಕಮದಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next