Advertisement

ವಿಜಯಪುರ: ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಮನೆ

08:37 PM Nov 19, 2019 | keerthan |

ವಿಜಯಪುರ: ನಗರದ ಬಿ.ಎಸ್.ಎನ್.ಎಲ್ ಕಛೇರಿ ಹಿಂಭಾಗದ ಹಳೆಯ ಮನೆಯೊಂದು ಮಂಗಳವಾರ ಬೆಂಕಿಗೆ ಆಹುತಿ ಆಗಿದೆ.

Advertisement

ಬುಖಾರಿ ಮಸಿದಿ ಬಳಿಯ ವಾಟರಕರ ಎಂಬರಿಗೆ ಸೇರಿದ ಕಟ್ಟಿಗೆಯಿಂದ ನಿರ್ಮಿಸಿದ್ದ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಮನೆಯನ್ನು ಸುಟ್ಟು ಹಾಕಿದೆ.

ಬೆಂಕಿಯ ಕೆನ್ನಾಲಿಗೆಗೆ ಮನೆಯವರು ಕೂಡಲೇ ಹೊರಗೆ ಓಡಿ ಬಂದಿದ್ದು, ನಂತರ ಅಡಿಗೆ ಸಿಲಿಂಡರ್ ಗೆ ಬೆಂಕಿ ತಾಗಿ ಸ್ಫೋಟಗೊಂಡಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸೇವೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next