Advertisement

ಹೆರಿಗೆ ಬಳಿಕ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಸಾವು, ನಾಲ್ವರು ಸಿಬ್ಬಂದಿ ಸಸ್ಪೆಂಡ್

11:01 PM Mar 19, 2024 | Team Udayavani |

ವಿಜಯಪುರ : ಹೆರಿಗೆ ಬಳಿಕ ಬಾಣಂತಿಗೆ ಕಾಣಿಸಿಕೊಂಡ ರಕ್ತದ ಸಮಸ್ಯೆಯಿಂದ ಮೃತಪಟ್ಟಿದ್ದು, ಕರ್ತವ್ಯ ನಿರ್ಲಕ್ಷ್ಯದ ಆರೋಪದಲ್ಲಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ನಾಲ್ವರನ್ನು ಅಮಾನತು ಮಾಡಿರುವ ಘಟನೆ ಜರುಗಮಾಡು ಬಬಲೇಶ್ವರ ತಾಲೂಕಿನ ದದಾಮಟ್ಟಿ ಗ್ರಾಮದ ಶಾರದಾ ದೊಡಮನಿ ಮೃತ ಮಹಿಳೆ.

Advertisement

ಗರ್ಭಿಣಿಯಾಗಿದ್ದ ಶಾರದಾ ಹೆರಿಗೆಗಾಗಿ ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಳು. ಗಂಡು-ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು.

ಆದರೆ ಹೆರಿಗೆ ಬಳಿಕ ಬಾಣಂತಿ ಶಾರದಾ ಅವರಿಗೆ ತೀವ್ರ ರಕ್ತಸ್ರಾವ ಸಮಸ್ಯೆ ಎದುರಾಗಿತ್ತು. ಇದರಿಂದ ಅಸ್ವಸ್ಥಳಾದ ಶಾರದಾಳಿಗೆ ರಕ್ತದ ಕೊರತೆ ನೀಡುವಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ.

ಬಾಣಂತಿ ಶಾರದಾಗೆ ಎ ಪಾಸಿಟಿವ್ ರಕ್ತದ ಬದಲಾಗಿ ಬಿ ಪಾಸಿಟಿವ್ ರಕ್ತ ನೀಡಿದ್ದೇ ಸಮಸ್ಯೆಗೆ ಕಾರಣ ಎಂದು ದೂರಲಾಗಿದೆ.

ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಜೀವನ್ಮರಣದೊಂದಿಗೆ ಹೋರಾಡುತ್ತಿದ್ದ ಶಾರದಾಳನ್ನು ಅತ್ಯಾಧುನಿಕ ಸೌಲಭ್ಯ ಇರುವ ಬಿ.ಎಲ್.ಡಿ.ಇ. ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಫೆ.23 ರಿಂದಲೇ ಬಿ.ಎಲ್.ಡಿ.ಇ. ಆಸ್ಪತ್ರೆ ವೈದ್ಯರ ಸತತ 26 ದಿನಗಳ ಪ್ರಯತ್ನ ಬಳಿಕವೂ ಚಿಕಿತ್ಸೆ ಫಲಿಸದೇ ಶಾರದಾ ಮೃತಪಟ್ಟಿದ್ದಾಳೆ.

ಮೃತಳ ಅನಾಥ ಅವಳಿ ಶಿಶುಗಳನ್ನು ಬಿ.ಎಲ್.ಡಿ.ಇ. ಆರೈಕೆ ಮಾಡಲಾಗುತ್ತಿದೆ.

ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ನಿರ್ಲಕ್ಷವೇ ಶಾರದಾಳ ಸಾವಿಗೆ ಕಾರಣ ಎಂದು ಕುಟುಂಬ ಸದಸ್ಯರು ದೂರಿದ್ದಾರೆ.

ಸದರಿ ಪ್ರಕರಣದಲ್ಲಿ ಲ್ಯಾಬ್ ಟೆಕ್ನೀಸಿಯನ್ ಈರಪ್ಪ ಜಂಬಗಿ, ಸ್ಟಾಪ್ ನರ್ಸ್ ಸುರೇಖಾ, ಲಕ್ಷ್ಮೀ, ಸವಿತಾ ಎಂಬವರನ್ನು ಸೇವೆಯಿಂದ ಅಮಾನತು ಮಾಡಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಮಾಸ್ತಿಹೊಳಿ ಆದೇಶ ಹೊರಡಿಸಿದ್ದಾರೆ.

ಬಾಣಂತಿ ಶಾರದಾ ಸಾವಿಗೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಆಕೆಯ ರಕ್ತದ ಗುಂಪಿನ‌ ಬದಲಾಗಿ ಬೇರೆ ಗುಂಪಿನ ರಕ್ತ ಹಾಕಿರುವುದೇ ಕಾರಣ . ಪ್ರಕರಣದ ತನಿಖೆ ನಡೆಸಬೇಕು. ಮೃತಳ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು‌ ಎಂದು ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇಡೀ ಪ್ರಕರಣದ ತನಿಖೆಯ ಬಳಿಕ ಶಾರದಾಳ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next