Advertisement

ಅಪ್ರಾಪ್ತ ಬಾಲಕಿಯರ ಹತ್ಯೆ ಪ್ರಕರಣ: ಪೊಲೀಸರಿಂದ ಮೂವರ ಬಂಧನ

06:43 PM May 23, 2021 | Team Udayavani |

ವಿಜಯಪುರ: ಜಿಲ್ಲೆಯ ಕುದರಿ ಸಾಲವಾಡಗಿ ಗ್ರಾಮದ ಇಬ್ಬರು ಅಪ್ರಾಪ್ತ ಬಾಲಕಿಯರ ಹತ್ಯಾ ಪ್ರಕರಣ ಬೇಧಿಸಿರುವ ಪೊಲೀಸರು, ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಸವನಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಯಾಳವಾರ ಗ್ರಾಮದ ಸೋಮನಗೌಡ ನಾಡಗೌಡ ಇವರ ತೋಟದ ಬಾವಿಯಲ್ಲಿ ಮೇ 14 ರಂದು ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಅಪ್ರಾಪ್ತ ಬಾಲೆಯರ ಶವಗಳು ಪತ್ತೆಯಾಗಿದ್ದವು.
ಈ ಕುರಿತು ಬಸವನ ಬಾಗೇವಾಡಿ ಡಿಎಸ್ಪಿ ಅರುಣಕುಮಾರ ಕೋಳೂರ, ಸಿಪಿಐ ಸೋಮಶೇಖರ ಜುಟ್ಟಲ, ವಿವಿಧ ಠಾಣೆಗಳ ಎಸೈಗಳಳಾದ ಬಸವನ ಬಾಗೇವಾಡಿಯ ಬಸವರಾಜ ಪಾಟೀಲ, ನಿಎಗುಂದಿಯ ಸಿ.ಐ.ಹೆರಕಲ್, ಮನಗೂಳಿಯ ರಾಜು ಮಮದಾಪುರ, ಕೂಡಗಿಯ ರೇಣುಕಾ ಜಕನೂರ ಇವರನ್ನು ಒಳಗೊಂಡಿದ್ದ ಪೊಲೀಸ್ ತನಿಖಾ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ :ಕಪ್ಪು ಶಿಲೀಂಧ್ರದ ಔಷಧದ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿದೆ : ಕುಮಾರಸ್ವಾಮಿ

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ಐಫೋನ್‌ಗಳನ್ನು ವಶಕ್ಕೆ ಪಡೆದಿದ್ದಾಗಿ ಎಸ್ಪಿ ಅನುಪಮ್ ಅಗರವಾಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next