Advertisement

ವಿಜಯಪುರ : ಬೈಕ್ ಮುಖಾಮುಖಿ ಡಿಕ್ಕಿ, ಮೂರು ಸಾವು

10:14 PM Nov 04, 2020 | mahesh |

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಬಳಿ ಬುಧವಾರ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿ ಮೂವರು ಮೃತಪಟ್ಟ ಘಟನೆ ನಡೆದಿದೆ.

Advertisement

ಮೃತರನ್ನು ತೊದಲಬಾಗಿ ಗ್ರಾಮದ ಲಕ್ಷ್ಮಣ ರಾಮಪ್ಪ ಮಾದರ, ಕಾಶಿಬಾಯಿ ಲಕ್ಷ್ಮಣ ಮಾದರ ಹಾಗೂ ಗಲಗಲಿ ಗ್ರಾಮದ ಅನಿಲ ರಾಚಪ್ಪ ಮೇಳಗೇರಿ ಎಂದು ಗುರುತಿಸಲಾಗಿದೆ.

ಚಿಕ್ಕಗಲಗಲಿ ಹಾಗೂ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಕೃಷ್ಣಾ ನಗರ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬಬಲೇಶ್ವರ ಠಾಣೆ ಪೊಲಿಸರು, ಘಟನೆಯಲ್ಲಿ ಗಾಯಗೊಂಡಿದ್ದ ಶಿವಪೂಜಯ್ಯ ಶ್ರೀಶೈಲ ಹಿರೇಮಠ ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next