Advertisement

ವಿಜಯಪುರ: ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದ ರೈತ ಶವವಾಗಿ ಪತ್ತೆ !

08:26 PM Oct 15, 2020 | Mithun PG |

ವಿಜಯಪುರ: ಹೊಲಕ್ಕೆ ತೆರಳಿದ್ದ ವೇಳೆ ಹಳ್ಳದ ಪ್ರವಾಹದಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗಿದ್ದ ರೈತ ಶಿವಪುತ್ರ ಶವವಾಗಿ ಪತ್ತೆಯಾಗಿದ್ದಾರೆ

Advertisement

ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಶಿವಪುತ್ರ ಹನುಮಂತ ನಾಟೀಕರ ಎಂಬ 35 ವರ್ಷದ ರೈತ ಹಳ್ಳದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಸತತ ಮಳೆ ಸುರಿಯುತ್ತಿರುವ ಕಾರಣ ಜಮೀನಿನಲ್ಲಿ ಬೆಳೆಯ ಸ್ಥಿತಿಗತಿ ಅರಿಯಲು ಗುರುವಾರ ಬೆಳಿಗ್ಗೆ ಶಿವಪುತ್ರ ತಮ್ಮ ಜಮೀನಿಗೆ ಹೊರಟಿದ್ದಾಗ ಹಳ್ಳ ದಾಟುವ ಹಂತದಲ್ಲಿ ಪ್ರವಾಹದ ಸೆಳೆತಕ್ಕೆ ಸಿಲುಕಿದ್ದರು.

ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸಹಕಾರದಿಂದ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳಿಗೆ ಸತತ 6 ಗಂಟೆ ಬಳಿಕ ಘಟನಾ ಸ್ಥಳಕ್ಕಿಂತ ಅನತಿ ದೂರದಲ್ಲಿ ಶವ‌ ಪತ್ತೆಯಾಗಿದೆ. ದೇವರಹಿಪ್ಪರಗಿ ತಹಶೀಲ್ದಾರ ಖಡಕಭಾವಿ ಸ್ಥಳದಲ್ಲೇ ಇದ್ದು, ಶೋಧ ಕಾರ್ಯದ‌ ಮೇಲ್ವಿಚಾರಣೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next