Advertisement

ಶ್ರೀಕೃಷ್ಣದೇವರಾಯ ವಿವಿ ಎಡವಟ್ಟು: ಶೇ. 30 ರಷ್ಟು ಬಿಎಸ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

01:09 PM Apr 09, 2022 | Team Udayavani |

ಗಂಗಾವತಿ: ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಒಂದಿಲ್ಲೊಂದು ಎಡವಟ್ಟಿನಿಂದ ಹೆಸರಾಗಿದೆ. ಇದೀಗ ಪದವಿ ಪರೀಕ್ಷೆ ನಡೆಸುವ ಸಂಬಂಧ ದಿನಾಂಕ ಅದಲು ಬದಲು ಮಾಡಿ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದ್ದು ಶೇ.30 ರಷ್ಟು ವಿದ್ಯಾರ್ಥಿಗಳು ಬಿಎಸ್ಸಿ ಗಣಿತ ಪರೀಕ್ಷೆಯಿಂದ ಹೊರಗೆ ಉಳಿಯುವಂಥಾಗಿದೆ.

Advertisement

ಏಪ್ರಿಲ್ 09 ರಂದು ನಡೆಯಬೇಕಿದ್ದ ಬಿಎಸ್ಸಿ ಮೂರನೆಯ ಸೆಮಿಸ್ಟರ್  ಗಣಿತ ವಿಷಯವನ್ನು ಮುಂಚಿತವಾಗಿಯೇ ಏಪ್ರಿಲ್ ಎಂಟರಂದು ನಡೆಸಲಾಗಿದೆ ಈ ಕುರಿತು ವಿವಿಯವರು ಏ 04 ರಂದು ನೋಟಿಸ್ ಜಾರಿ ಮಾಡಿದ್ದು ಇದನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ವಿಫಲವಾಗಿದೆ . ಇದರಿಂದಾಗಿ ಏಪ್ರಿಲ್ 8ರಂದು  ಬಿಎಸ್ಸಿ ಗಣಿತ ಮೂರನೆಯ ಸೆಮಿಸ್ಟರ್ ವಿಷಯದಲ್ಲಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳ ಪೈಕಿ ಶೇ.30 ರಷ್ಟು ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಮೊಬೈಲ್ ಇಲ್ಲದ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಿಎಸ್ಸಿ ಗಣಿತ ಪರೀಕ್ಷೆಗೆ ಗೈರಾಗಿದ್ದಾರೆ ಇದರಿಂದ ಅವರ ಭವಿಷ್ಯದಲ್ಲಿ ಆತಂಕ ಮೂಡಿದೆ ವಿವಿಯವರು ಕೂಡಲೇ ವಿದ್ಯಾರ್ಥಿಗಳ ಗಮನಕ್ಕೆ ತಂದು ಮರು ಪರೀಕ್ಷೆ ನಡೆಸುವಂತೆ ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿಯ ವಿದ್ಯಾ ವಿಷಯಕ ಪರಿಷತ್ ಸದಸ್ಯ ಹಾಗೂ ಉಪನ್ಯಾಸಕ ಶಿವಾನಂದ ಮೇಟಿ ಒತ್ತಾಯಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next