Advertisement

Vijayakanth’s Last Rites; ಖ್ಯಾತ ನಟ ದಳಪತಿ ವಿಜಯ್‌ ಮೇಲೆ ಚಪ್ಪಲಿ ಎಸೆದು ಹಲ್ಲೆಗೆ ಯತ್ನ

11:54 PM Dec 29, 2023 | Team Udayavani |

ಚೆನ್ನೈ: ತಮಿಳುನಾಡಿನ ಖ್ಯಾತ ನಟ, ರಾಜಕಾರಣಿ ವಿಜಯಕಾಂತ್‌ ಅವರ ಅಂತಿಮ ಸಂಸ್ಕಾರಕ್ಕೆ ತರಳಿದ್ದ ನಟ ದಳಪತಿ ವಿಜಯ್‌ ಅವರ ಮೇಲೆ ದುಷ್ಕರ್ಮಿಗಳು ಚಪ್ಪಲಿ ಎಸೆದು ಹಲ್ಲೆ ನಡೆಸಲು ಮುಂದಾದ ಘಟನೆ ವರದಿಯಾಗಿದೆ.

Advertisement

ವಿಜಯಕಾಂತ್‌ ಅವರ ಅಂತಿಮ ದರ್ಶನ ಪಡೆಯ ಲೆಂದು ಶನಿವಾರ ನಟ ದಳಪತಿ ವಿಜಯ್‌ ತೆರಳಿದ್ದರು. ಅಂತಿಮ ನಮನ ಸಲ್ಲಿಸಿ ಕುಟುಂಬ ದವರಿಗೂ ಸಾಂತ್ವನ ಕೂಡ ಹೇಳಿದರು. ಬಳಿಕ ನಟ ಹೊರಬರುತ್ತಿದ್ದಂತೆ ವಿಜಯ್‌ಕಾಂತ್‌ ಅವರ ಅಭಿಮಾನಿಗಳ ಗುಂಪೊಂದು ಇದ್ದಕ್ಕಿದ್ದಂತೆ ನಟ ವಿಜಯ್‌ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, ಪೊಲೀಸರು ಅದನ್ನು ತಪ್ಪಿಸಿದ್ದಾರೆ. ಆದಾಗ್ಯೂ, ಓರ್ವ ದುಷ್ಕರ್ಮಿ ವಿಜಯ್‌ ಅವರತ್ತ ಚಪ್ಪಲಿ ಎಸೆದಿದ್ದಾನೆ. ಈ ವೀಡಿಯೋ ಜಾಲತಾಣದಲ್ಲೂ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next