Advertisement

ವಿಜಯ ಮಲ್ಯ ಹಸ್ತಾಂತರಿಸಿ: ಯುಕೆಗೆ ಭಾರತ ಮನವಿ

03:45 AM Feb 10, 2017 | Team Udayavani |

ನವದೆಹಲಿ: ಕೋಟಿಗಟ್ಟಲೆ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ, ಉದ್ಯಮಿ ವಿಜಯ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಕೋರಿ ಯುಕೆಗೆ ಭಾರತ ಸರ್ಕಾರ ಮನವಿ ಸಲ್ಲಿಸಿದೆ. ಸಿಬಿಐ ನೀಡಿರುವ ಕೋರಿಕೆ ಪತ್ರವನ್ನು ಯುಕೆ ಹೈಕಮಿಷನ್‌ಗೆ ಹಸ್ತಾಂತರಿಸಿರುವುದಾಗಿ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್‌ ಸ್ವರೂಪ್‌ ತಿಳಿಸಿದ್ದಾರೆ. ನಾವು ಮಾಡಬೇಕಾದ ಪ್ರಕ್ರಿಯೆಯನ್ನು ಮಾಡಿ ಮುಗಿಸಿದ್ದೇವೆ. ಕ್ರಮ ಕೈಗೊಳ್ಳುವುದು ಅವರಿಗೆ ಬಿಟ್ಟಿದ್ದು ಎಂದೂ ಸ್ವರೂಪ್‌ ಹೇಳಿದ್ದಾರೆ.

Advertisement

ಮಲ್ಯಗೆ ಮತ್ತೂಂದು ಹಿನ್ನಡೆ ಎಂಬಂತೆ, ಯುನೈಟೆಡ್‌ ಬ್ರಿàವರೀಸ್‌ ಕಂಪನಿಯು ತನ್ನ ಕಾರ್ಯಕಾರಿಯೇತರ ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಿದೆ. ಸೆಬಿ ಆದೇಶದ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಕಂಪನಿ ತಿಳಿಸಿದೆ. ಯುಪಿಎ ಅವಧಿಯಲ್ಲಿ ಮಲ್ಯಗೆ ಭಾರಿ ಸಾಲ ನೀಡಲಾಗಿತ್ತು. ಆದರೆ, ಮೋದಿ ಸರ್ಕಾರವು ಅವರಿಗೆ ಒಂದು ರುಪಾಯಿಯ ನೆರವನ್ನೂ ನೀಡಿಲ್ಲ ಎಂದು ಸಂಸತ್ತಿನಲ್ಲಿ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next