Advertisement

ಮಲ್ಯ ಕೇಸ್‌ ವಿಚಾರಣೆ

11:28 AM Aug 27, 2018 | |

ಮುಂಬಯಿ: ಬಹುಕೋಟಿ ವಂಚನೆ ಆರೋಪಿ ವಿಜಯ ಮಲ್ಯ ವಿರುದ್ಧ ಸೋಮವಾರ ಹೊಸ ಕಾನೂನು ಅಸ್ತ್ರ ಪ್ರಯೋಗವಾಗಲಿದೆ. ಹೊಸದಾಗಿ ಜಾರಿಗೆ ಬಂದಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾನೂನಿನ ಅಡಿ ಮೊದಲ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸೋಮವಾರ ವಿಶೇಷ ನ್ಯಾಯಾಲಯವು ಪ್ರಕರಣ ಕೈಗೆತ್ತಿಕೊಳ್ಳಲಿದ್ದು, ಮಲ್ಯ ಹಾಜರಾಗಬೇಕಿದೆ.
ಲಂಡನ್‌ನಲ್ಲಿ ಗಡಿಪಾರು ಪ್ರಕರಣದಲ್ಲಿ ಹೋರಾಟ ನಡೆಸುತ್ತಿರುವುದರಿಂದ ಮಲ್ಯ ಖುದ್ದು ಕೋರ್ಟ್‌ಗೆ ಹಾಜರಾಗುವುದಿಲ್ಲ. ಅವರ ಕಾನೂನು ಪ್ರತಿನಿಧಿಗಳು ಪಿಎಂಎಲ್‌ಎ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಎಂ.ಎಸ್‌.ಅಜ್ಮಿ ಅವರ ಎದುರು ಹಾಜರಾಗಿ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಬಹುದು ಎಂದು ಮೂಲಗಳು ತಿಳಿಸಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next