Advertisement

Kollywood: ವಿಜಯ್‌ ಮೇಲೆ ಚಪ್ಪಲಿ ಎಸೆತ; ದೂರು ದಾಖಲಿಸಿದ ವಿಜಯ್ ಮಕ್ಕಳ್ ಇಯಕ್ಕಂ ಸದಸ್ಯ

06:11 PM Jan 06, 2024 | Team Udayavani |

ಚೆನ್ನೈ: ಇತ್ತೀಚೆಗೆ ನಟ ದಳಪತಿ ವಿಜಯ್‌ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಚಪ್ಪಲಿ ಎಸೆತ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ  ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ಡಿಸೆಂಬರ್ 28 ರಂದು ಖ್ಯಾತ ನಟ-ರಾಜಕಾರಣಿ ವಿಜಯಕಾಂತ್ ಅವರ ಅಂತ್ಯಕ್ರಿಯೆಯಲ್ಲಿ ದಳಪತಿ ವಿಜಯ್ ಭಾಗವಹಿಸಿದ್ದರು. ವಿಜಯ್‌ ವಿಜಯಕಾಂತ್‌ ಅವರ ಪತ್ನಿ ಹಾಗೂ ಮಕ್ಕಳಿಗೆ ಧೈರ್ಯ ತುಂಬಿ ಕಾರಿನತ್ತ ವಾಪಾಸ್‌ ಆಗುತ್ತಿದ್ದರು. ಇದೇ ವೇಳೆ ಅಭಿಮಾನಿಗಳು ವಿಜಯ್‌ ಸುತ್ತ ಬಂದಿದ್ದಾರೆ. ಕಾರಿನೊಳಗೆ ಹೋಗುವ ವೇಳೆ ಯಾರೋ ಒಬ್ಬರು ವಿಜಯ್‌ ಯತ್ತ ಚಪ್ಪಲಿ ಎಸೆದಿದ್ದಾರೆ. ಚಪ್ಪಲಿ ವಿಜಯ್‌ ಅವರ ಮೈಯ ಬಳಿಯೇ ಹಾರಿ ಬಿದ್ದಿದೆ.

ಈ ಘಟನೆಯ ವಿಡಿಯೋ ವೈರಲ್‌ ಆಗಿದ್ದು, ಇದರಿಂದ ವಿಜಯ್‌ ಅವರ ಅಭಿಮಾನಿಗಳಲ್ಲಿ ಬೇಸರ ಮನೆಮಾಡಿತು. ಇದೀಗ ಈ ಘಟನೆಗೆ ಕಾರಣಿಕರ್ತನಾದ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ.

ವಿಜಯ್ ಮಕ್ಕಳ್ ಇಯಕ್ಕಂ ಪಕ್ಷದ ಅವರ ದಕ್ಷಿಣ ಚೆನ್ನೈ ಜಿಲ್ಲಾ ಮುಖ್ಯಸ್ಥ ಕೆ. ಅಪ್ಪನು ಅವರು, ಕೊಯಂಬೆಡು ಪೊಲೀಸ್ ಠಾಣೆಯಲ್ಲಿ ವಿಜಯ್‌ ಅವರ ಮೇಲೆ ಚಪ್ಪಲಿ ಎಸೆದ ಘಟನೆಯಿಂದ ಅಭಿಮಾನಿಗಳಲ್ಲಿ ಬೇಸರ ಮನೆಮಾಡಿದೆ. ಆದಷ್ಟು ಬೇಗ ವ್ಯಕ್ತಿಯನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕೆಂದು ದೂರಿನಲ್ಲಿ ಹೇಳಿದ್ದಾರೆ.

ವಿಜಯ್‌ – ವಿಜಯಕಾಂತ್‌ ಎಸ್.ಎ. ಚಂದ್ರಶೇಖರ್‌ ಅವರ ʼ ಸೆಂಟೂರ ಪಾಂಡಿʼ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಇದರಿಂದ ವಿಜಯ್‌ ಕೆರಿಯರ್‌ ಗೆ ದೊಡ್ಡ ಮುನ್ನಡೆ ಸಿಕ್ಕಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next