Advertisement

ಇಂದಿನಿಂದ ವಿಜಯ್‌ ಹಜಾರೆ ಟ್ರೋಫಿ ಏಕದಿನ ಸರಣಿ

11:06 PM Dec 07, 2021 | Team Udayavani |

ಮುಂಬಯಿ: ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ತಮ್ಮ ಮೊತ್ತವನ್ನು ಹೆಚ್ಚಿಸಲು ನೆರವಾಗುವ “ವಿಜಯ್‌ ಹಜಾರೆ ಟ್ರೋಫಿ’ ಏಕದಿನ ದೇಶಿ ಕ್ರಿಕೆಟ್‌ ಸರಣಿ ಬುಧವಾರದಿಂದ ಆರಂಭವಾಗಲಿದೆ.

Advertisement

ಕರ್ನಾಟಕ ಬುಧವಾರದ ಮೊದಲ ಪಂದ್ಯದಲ್ಲಿ ಪುದುಚೇರಿಯನ್ನು ಎದುರಿಸಲಿದೆ. ಹಾಲಿ ಚಾಂಪಿಯನ್‌ ಮುಂಬಯಿ ತಂಡ ತಮಿಳುನಾಡನ್ನು ಎದುರಿಸಲಿದೆ. ತಮಿಳುನಾಡು ಇತ್ತೀಚಿಗಷ್ಟೇ ಕರ್ನಾಟಕವನ್ನು ಅಂತಿಮ ಎಸೆತದಲ್ಲಿ ಮಣಿಸಿ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಚಾಂಪಿಯನ್‌ ಆಗಿ ಮೂಡಿಬಂದಿತ್ತು. ಈ ಪಂದ್ಯಗಳು ತಿರುವನಂತಪುರದಲ್ಲಿ ನಡೆಯಲಿವೆ.

ಮುಂಬಯಿ ತಂಡವನ್ನು ಶಮ್ಸ್‌ ಮುಲಾನಿ ಮುನ್ನಡೆಸಲಿದ್ದಾರೆ. ದಿನೇಶ್‌ ಕಾರ್ತಿಕ್‌ ಸೇರ್ಪಡೆಯಿಂದ ತಮಿಳುನಾಡು ಬಲಿಷ್ಠಗೊಂಡಿದೆ.

ಇದನ್ನೂ ಓದಿ:ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಒಟ್ಟು 38 ತಂಡಗಳು ಈ ಕೂಟದಲ್ಲಿ ಸ್ಪರ್ಧೆಗೆ ಇಳಿಯಲಿವೆ. ತಂಡಗಳನ್ನು 6 ವಿಭಾಗಳಾಗಿ ವಿಂಗಡಿಸಲಾಗಿದೆ. 7 ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಈ ತಾಣಗಳೆಂದರೆ ತಿರುವನಂತಪುರಂ, ಚಂಡೀಗಢ, ರಾಜ್‌ಕೋಟ್‌, ಮುಂಬಯಿ, ಗುವಾಹಟಿ, ರಾಂಚಿ ಮತ್ತು ಜೈಪುರ.

Advertisement
Advertisement

Udayavani is now on Telegram. Click here to join our channel and stay updated with the latest news.

Next