Advertisement

ವಿಜಯ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ನಾಲ್ಕು ವಿಕೆಟ್‌ ಗೆಲುವು

10:36 PM Nov 17, 2022 | Team Udayavani |

ಕೋಲ್ಕತಾ: ಶಿಖರ್‌ ಧವನ್‌ ಮತ್ತು ಇಶಾಂತ್‌ ಶರ್ಮ ಅವರ ಅನುಪಸ್ಥಿತಿಯಲ್ಲಿ ಆಡಿದ ದಿಲ್ಲಿ ತಂಡವು ವಿಜಯ ಹಜಾರೆ ಟ್ರೋಫಿಗಾಗಿ ನಡೆಯುತ್ತಿರುವ “ಬಿ’ ಬಣದ ಪಂದ್ಯದಲ್ಲಿ ಕರ್ನಾಟಕ ತಂಡದೆದುರು ನಾಲ್ಕು ವಿಕೆಟ್‌ಗಳಿಂದ ಸೋಲನ್ನು ಕಂಡಿದೆ. ಇದು ದಿಲ್ಲಿ ತಂಡದ ಸತತ ಎರಡನೇ ಸೋಲು ಆಗಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ದಿಲ್ಲಿ ತಂಡವು ವಾಸುಕಿ ಕೌಶಿಕ್‌ ಮತ್ತು ಶ್ರೇಯಸ್‌ ಗೋಪಾಲ್‌ ಅವರ ದಾಳಿಗೆ ಕುಸಿದು 45.4 ಓವರ್‌ಗಳಲ್ಲಿ 159 ರನ್ನಿಗೆ ಆಲೌಟಾಯಿತು. ಲಲಿತ್‌ ಯಾದವ್‌ 59 ರನ್‌ ಹೊಡೆದರು. ಕೌಶಿಕ್‌ 23 ರನ್ನಿಗೆ 3 ಮತ್ತು ಗೋಪಾಲ್‌ 25 ರನ್ನಿಗೆ 3 ವಿಕೆಟ್‌ ಕಿತ್ತರು.

ಕರ್ನಾಟಕ ತಂಡವು ಆರಂಭಿಕ ರವಿಕುಮಾರ್‌ ಸಮರ್ಥ್ ಅವರ ಆಕರ್ಷಕ ಆಟದಿಂದಾಗಿ 29.4 ಓವರ್‌ಗಳಲ್ಲಿ 6 ವಿಕೆಟಿಗೆ 161 ರನ್‌ ಗಳಿಸಿ ಜಯಭೇರಿ ಬಾರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next