Advertisement

ಈಗ ಹುಡ್ಗೀರೂ ಹೇರ್‌ ಕಟ್ಟಿಂಗ್‌ ಮಾಡ್ತಾರೆ!; ವಿಧಾನಸಭೆಯಲ್ಲಿ ಚರ್ಚೆ 

04:48 PM Jun 13, 2017 | Team Udayavani |

ಬೆಂಗಳೂರು : ವಿಧಾನಸಭೆಯಲ್ಲಿ ಕೂದಲು ಕತ್ತರಿಸುವ ವಿಚಾರದಲ್ಲಿ ಹಾಸ್ಯ ಭರಿತ ಸ್ವಾರಸ್ಯಕರ ಚರ್ಚೆ ಮಂಗಳವಾರ ನಡೆಯಿತು. 

Advertisement

ಇದಕ್ಕೆ ಕಾರಣವಾಗಿದ್ದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರು ಕೌಶಾಲಾಭಿವೃದ್ಧಿ ನಿಗಮದಲ್ಲಿ ಜಾತಿ ಆಧಾರಿತ ತರಬೇತಿ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದ್ದು. ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ ಜಾತಿ ಆಧಾರಿತ ಅಲ್ಲ ವೃತ್ತಿ ಆಧಾರಿತ ತರಬೇತಿ ನೀಡಲಾಗುತ್ತಿದೆ. ಹಿಂದೆ ಭತ್ತ,ರಾಗಿ ನೀಡಿದರೆ ಮನೆ ಮಂದಿಗೆಲ್ಲಾ ಕಟ್ಟಿಂಗ್‌ ಮಾಡಲು ಸಾಧ್ಯವಿತ್ತು.ಇಂದು ಸ್ಟಾರ್‌ ಹೊಟೇಲ್‌ಗ‌ಳಲ್ಲಿ ದುಬಾರಿ ಬೆಲೆಗೆ ಕಟ್ಟಿಂಗ್‌ ಮಾಡುತ್ತಾರೆ.  15 ವರ್ಷಗಳ ಹಿಂದೆ ನಾನು ಕಟ್ಟಿಂಗ್‌ಗೆ 200 ರೂಪಾಯಿ ಕೊಟ್ಟಿದ್ದೆ ಎಂದರು. 

ಆ ವೇಳೆ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ ಶಾಸಕ ಕೆ.ಎನ್‌.ರಾಜಣ್ಣ  ಸ್ಟಾರ್‌ ಹೊಟೇಲ್‌ಗ‌ಳಲ್ಲಿ ಹುಡ್ಗಿàರು ಹೇರ್‌ ಕಟ್ಟಿಂಗ್‌ ಮಾಡುತ್ತಾರೆ. ಅದಕ್ಕೆ ರೇಟ್‌ ಜಾಸ್ತಿ ಸರ್‌.ನಿಮಗೆ ಅದೆಲ್ಲಾ ಗೊತ್ತಿದೆ ಅಲ್ಲ ಸರ್‌ .. ಎಂದು ಸದನವನ್ನು ನಗೆ ಗಡಲಲ್ಲಿ ತೇಲಿಸಿದರು.

ಇದಕ್ಕೆ ಉತ್ತರಿಸಿದ ಸಿಎಂ ಸ್ಟಾರ್‌ ಹೊಟೇಲ್‌ನಲ್ಲಿ ಕಟ್ಟಿಂಗ್‌ ಮಾಡುವವರು ಸಣ್ಣ ಜಾತಿಯವರಲ್ಲ. ಅವರೆಲ್ಲಾ ತರಬೇತಿ ಪಡೆದು ಬರುವವರು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next