Advertisement

VIDEO; ‘ನೀನು ಬಂದಾಗೆಲ್ಲಾ ಈ ಹಾಡು ಹಾಕುತ್ತಾರೆ..’: ಕೇಶವ್ ಮಹಾರಾಜ್ ಜತೆ ರಾಹುಲ್ ಮಾತುಕತೆ

12:58 PM Dec 22, 2023 | Team Udayavani |

ಪಾರ್ಲ್: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಗೆದ್ದ ಭಾರತ ತಂಡವು ಸರಣಿ ಜಯಿಸಿದೆ. ಈ ಹಿಂದೆ ಸರಣಿ ಸೋಲನುಭವಿಸಿದ್ದ ಕೆಎಲ್ ರಾಹುಲ್ ಈ ಬಾರಿ 2-1 ಅಂತರದಿಂದ ಗೆದ್ದು ಪ್ರತೀಕಾರ ತೀರಿಸಿದ್ದಾರೆ.

Advertisement

ಪಾರ್ಲ್ ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಭಾರತ ತಂಡವು 78 ರನ್ ಅಂತರದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸಂಜು ಸ್ಯಾಮ್ಸನ್ ಶತಕದ ನೆರವಿನಿಂದ ಎಂಟು ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ ತಂಡವು 45.5 ಓವರ್ ಗಳಲ್ಲಿ 218 ರನ್ ಗಳಿಗೆ ಆಲೌಟಾಯಿತು.

ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ಮತ್ತು ಆಲ್ ರೌಂಡರ್ ಕೇಶವ್ ಮಹಾರಾಜ್ ನಡುವಿನ ಮಾತುಕತೆ ಇದೀಗ ವೈರಲ್ ಆಗಿದೆ.

ಎರಡನೇ ಇನ್ನಿಂಗ್ಸ್ ವೇಳೆ ದಕ್ಷಿಣ ಆಫ್ರಿಕಾ ತಂಡವು 177 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡ ವೇಳೆ ಕೇಶವ್ ಮಹಾರಾಜ್ ಆಡಲು ಕ್ರೀಸಿಗೆ ಬಂದರು. ಈ ವೇಳೆ ಸ್ಟೇಡಿಯಂನಲ್ಲಿ ‘ರಾಮ್ ಸಿಯಾ ರಾಮ್’ ಹಾಡು ಹಾಕಿದ್ದರು. ಈ ವೇಳೆ ಕೇಶವ್ ಬಳಿ ಬಂದ ರಾಹುಲ್, ‘ನೀನು ಬ್ಯಾಟಿಂಗ್ ಗೆ ಬಂದಾಗಲೆಲ್ಲಾ ಇದೇ ಹಾಡು ಹಾಕುತ್ತಾರಲ್ಲಾ’ ಎಂದರು. ಇದಕ್ಕೆ ನಗುಮುಖದಿಂದ ಪ್ರತಿಕ್ರಿಯೆ ನೀಡಿದ ಕೇಶವ್, ‘ಹೌದು’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next