Advertisement

ಮೂಗೂರು ಗ್ರಾಮದಲ್ಲಿ ವಿಜಯೋತ್ಸವ

02:06 PM May 20, 2018 | |

ತಿ.ನರಸೀಪುರ: ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಎಂ. ಅಶ್ವಿ‌ನ್‌ ಕುಮಾರ್‌ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಮೂಗೂರು ಗ್ರಾಮದಲ್ಲಿ ವಿಜಯೋತ್ಸವ ಆಚರಿಸಿದರು. 

Advertisement

ಗ್ರಾಮಕ್ಕೆ ಆಗಮಿಸಿದ ಎಂ.ಅಶ್ವಿ‌ನ್‌ ಕುಮಾರ್‌ರನ್ನು ಗ್ರಾಮಸ್ಥರು  ಆರತಿ ಬೆಳಗಿ ಪಟಾಕಿ ಸಿಡಿಸುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿ, ಹೆಗಲ ಮೇಲೆ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.  

ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕರ್ತರು ದೇಗುಲದ ಮುಂದೆ 101  ಈಡುಗಾಯಿ ದೇವರಿಗೆ ಸಮರ್ಪಿಸಿದರು. ವಿಜಯೋತ್ಸವ ಆಚರಿಸಿ ಅಶ್ವಿ‌ನ್‌ಕುಮಾರ್‌ ಪರ ಜಯ ಘೋಷಣೆ ಕೂಗಿ ತಮ್ಮ ಹರ್ಷ ವ್ಯಕ್ತಪಡಿಸಿದರು.  

ಕ್ಷೇತ್ರದ ಜನತೆ ತಮ್ಮ ಮೇಲೆ ವಿಶ್ವಾಸ ವಿಟ್ಟು ಗೆಲ್ಲಿಸಿಕೊಟ್ಟಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದು, ಕ್ಷೇತ್ರದ ಅಭಿ ವೃದ್ಧಿಯೇ ತಮ್ಮ ಧ್ಯೇಯೋದ್ದೇಶ. ಸದಾ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿ  ರುತ್ತೇನೆ. ಕ್ಷೇತ್ರವನ್ನು ರಾಜ್ಯ ದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.  

ಈ ವೇಳೆ ಮುಖಂಡರಾದ ಎಂ.ವಿ. ಬಸವಣ್ಣ, ಎಂ.ಆರ್‌.ಸೋಮಣ್ಣ, ಶಿವ ಮೂರ್ತಿ, ಯಜಮಾನ್‌ ಪುಟ್ಟ ಮಾದಯ್ಯ, ಗೌಡರ ಜಗದೀಶ್‌ ಮೂರ್ತಿ, ಗ್ರಾಪಂ  ಸದಸ್ಯ ಎಂ.ಆರ್‌. ಸುಂದರ್‌, ದೇವಾನಂದ, ಗುರುಸಿದ್ದಪ್ಪ, ಮಹದೇವಪ್ಪ, ಲೋಕೇಶ್‌ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next