Advertisement

ಸಿದ್ಧಾಂತ್‌-ಸಾನ್ವಿ, ಅರ್ನವ್‌-ಆಯುಷಿಗೆ ವಿಜಯಮಾಲೆ

02:11 PM Jul 07, 2019 | Suhan S |

ಧಾರವಾಡ: ಇಲ್ಲಿನ ಕಾಸ್ಮಸ್‌ ಕ್ಲಬ್‌ ಆವರಣದಲ್ಲಿ ನಡೆದಿರುವ ರಾಜ್ಯಮಟ್ಟದ ರ್‍ಯಾಂಕಿಂಗ್‌ ಟೇಬಲ್ ಟೆನಿಸ್‌ ಪಂದ್ಯಾವಳಿಯ 3ನೇ ದಿನವಾದ ಶನಿವಾರದ ಪಂದ್ಯಗಳು ಗಮನ ಸೆಳೆದವು.

Advertisement

ಕೆಡೆಟ್ ಬಾಯ್ಸ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಿದ್ಧಾಂತ್‌ ವಾಸನ್‌ 3-2 ಅಂಕಗಳಿಂದ ತೇಶಬ್‌ ಅವರನ್ನು ಮಣಿಸಿದರೆ ಇದಕ್ಕೂ ಮುನ್ನ ನಡೆದ ಮೊದಲ ಸೆಮಿಸ್‌ನಲ್ಲಿ ತೇಶಬ್‌ ಕೆ. ಆಯುಶ್‌ನನ್ನು 3-2 ರಿಂದ, 2ನೇ ಸೆಮಿಸ್‌ನಲ್ಲಿ ಸಿದ್ಧಾಂತ್‌ ವಾಸನ್‌ ಅವರು ಶೇಶಾಂತ್‌ ರಾಮಸ್ವಾಮಿ ಅವರನ್ನು 3-0 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶ ಮಾಡಿದ್ದರು.

ಮಿನಿ ಕೆಡೆಟ್ ಗಲ್ಸ್ರ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಆಯುಷಿ ಬಾಲಕೃಷ್ಣಾ ಘೋಡ್ಸೆ, ಸುಮೇಧಾ ಭಟ್ ಅವರನ್ನು 3-1 ಅಂಕಗಳಿಂದ ಮಣಿಸಿದರು. ಇದಕ್ಕೂ ಮುನ್ನ ನಡೆದ ಮೊದಲ ಸೆಮಿಸ್‌ನಲ್ಲಿ ಆಯುಷಿ, ಕೈರಾ ಬಾಳಿಗಾ ಅವರನ್ನು 3-2ರಿಂದ, 2ನೇ ಸೆಮಿಸ್‌ನಲ್ಲಿ ಸುಮೇಧಾ, ಸ್ಮತಿ ಸುದರ್ಶನ ಅವರನ್ನು 3-1 ಅಂಕಗಳಿಂದ ಸೋಲಿಸಿದರು.

ಮಿನಿ ಕೆಡೆಟ್ ಬಾಯ್ಸ ಸಿಂಗಲ್ಸ್ನ ಫೈನಲ್ ಪಂದ್ಯದಲ್ಲಿ ಅರ್ನವ್‌ ಎನ್‌., ಅಥರ್ವ ನವರಂಗೆ ಅವರನ್ನು 3-2 ಅಂಕಗಳಿಂದ ಸೋಲಿಸಿದರೆ ಫೈನಲ್ಗೆ ಪ್ರವೇಶಿಸಲು ನಡೆದ ಮೊದಲ ಸೆಮಿಸ್‌ನಲ್ಲಿ ಅಥರ್ವ, ಸಿದ್ಧನಾಥ ಧಾರಿವಾಲ್ ಅವರನ್ನು 3-0 ಹಾಗೂ 2ನೇ ಸೆಮಿಸ್‌ನಲ್ಲಿ ಅರ್ನವ್‌, ವೇದಾಂತ ವಶಿಷ್ಟ ಅವರನ್ನು 3-0 ಅಂಕಗಳಿಂದ ಮಣಿಸಿದರು.

ಕೆಡೆಟ್ ಗಲ್ಸ್ರ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಾನ್ವಿ ವಿಶಾಲ ಮಾಂಡೇಕರ ಅವರು ರುತು ಪಂಡಿತ ಅವರನ್ನು 3-0 ಅಂಕಗಳಿಂದ ಸೋಲಿಸಿದರು. ಮೊದಲ ಸೆಮಿಸ್‌ನಲ್ಲಿ ಸಾನ್ವಿ, ಪ್ರಣವಿ ಎಚ್. ಅವರನ್ನು 3-2ರಿಂದ, ರುತು ಅವರು ನೀತಿ ಅಗರವಾಲ್ ಅವರನ್ನು 3-2ರಿಂದ ಸೋಲಿಸಿದ್ದರು. ಜೂನಿಯರ್ಸ್‌ ಆಟಗಳು ಬಾಕಿ ಇದ್ದು, ರವಿವಾರ ಪಂದ್ಯಾವಳಿಗೆ ತೆರೆ ಬೀಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next