Advertisement
ಬಹುಜನ ಸಮಾಜ ಪಾರ್ಟಿ: ಪೇಶ್ವೆಗಳ ಎರಡನೇ ಬಾಜಿರಾಯನ ಆಡಳಿತದಲ್ಲಿ ವೈದಿಕ ಮನುಧರ್ಮಶಾಸ್ತ್ರ ಆಧಾರಿತ ಚಾತುರ್ವರ್ಣ ಜಾತಿ ಪದ್ಧತಿ ಅನುಸರಿಸುತ್ತಾ ಅಸ್ಪೃಶ್ಯರನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಬಾಂಬೆ ನೇಟಿವ್ ಇನ್ಫಂಟ್ರಿಯಾ 2ನೇ ಬೆಟಾಲಿಯನ್ನ ಮೊದಲ ರೆಜಿಮೆಂಟ್ನಲ್ಲಿ ಸೈನಿಕರಾಗಿ ಕೆಲಸ ಮಾಡುತ್ತಿದ್ದವರು ಜಾತಿ ಪದ್ಧತಿ ಅನುಸರಣೆ ತೀವ್ರವಾಗಿ ವಿರೋಧಿಸುತ್ತಿದ್ದರು. ಅದೇ ಸಂದರ್ಭಲ್ಲಿ ಬ್ರಿಟಿಷರು ಪೇಶ್ವೆಗಳ ವಿರುದ್ಧ ನಡೆಸಿದ ಯುದ್ಧದಲ್ಲಿ ಪಾಲ್ಗೊಂಡಿದ್ದ ಮಹರ್ ಭಂಗಿ, ಚಮ್ಮಾರ್ ಇತರೆ ಸಮುದಾಯದವರು 1818ರ ಜ. 1ರಂದು ಭೀಮಾ ನದಿ ತೀರದಲ್ಲಿ ನಡೆದ ಯುದ್ಧದಲ್ಲಿ ವಿರೋಚಿತ ಹೋರಾಟ ನಡೆಸಿ, 21 ಜನರು ಹುತಾತ್ಮರಾದರು ಎಂದು ಕಾರ್ಯಕರ್ತರು ಸ್ಮರಿಸಿದರು.
ಸಾಮಾಜಿಕ ಸಂಘರ್ಷ ಸಮಿತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿದ್ಯಾರ್ಥಿಗಳ ಒಕ್ಕೂಟ ಕಾರ್ಯಕರ್ತರು ಕೋರೆಗಾಂವ್ ವಿಜಯೋತ್ಸವ ಆಚರಿಸಿದರು. ಅಪಮಾನ, ಅವಮಾನಕ್ಕೀಡಾಗಿದ್ದ ದಲಿತರು, ಶೋಷಿತರು ತಮಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ 1818 ರ ಜ. 1 ರಂದು ಕೋರೆಂಗಾವ್ನಲ್ಲಿ ನಡೆದ ಯುದ್ಧದಲ್ಲಿ ಜಯ ಗಳಿಸಿದ್ದರ ಸವಿನೆನಪಿಗಾಗಿ ಕೋರೆಂಗಾವ್ ಸಂಗ್ರಾಮದ- ಶೋಷಿತರ ವಿಜಯದ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಸಮಿತಿ ಜಿಲ್ಲಾ ಅಧ್ಯಕ್ಷ ಪಿ. ತಿಪ್ಪೇರುದ್ರಪ್ಪ, ಇಮ್ತಿಯಾಜ್ ಹುಸೇನ್, ಬಿ.ಎನ್. ನಾಗೇಶ್, ಡಿ. ಅಂಜಿನಪ್ಪ, ಎಂ. ಪ್ರಕಾಶ್, ಚಂದ್ರಪ್ಪ, ಪರಶುರಾಮ್ ಹೊನ್ನಾಳಿ, ಗುಮ್ಮನೂರು ಪರಶುರಾಮ್, ಮಂಜಪ್ಪ, ಆರ್. ಜಯಪ್ಪ, ಡಿ. ಜಯಪ್ಪ, ತಿಪ್ಪೇಶ್, ಎಸ್.ಎಲ್. ದುರುಗೇಶ್, ಗಂಗಾಧರ್, ಎಂ. ಕಿರಣ್ ಇತರರು ಇದ್ದರು.