Advertisement

ಹಿರಿಯ ಸಾಹಿತಿ ಕೆ.ಬಿ.ಸಿದ್ಧಯ್ಯ ನಿಧನ

11:42 PM Oct 18, 2019 | Lakshmi GovindaRaju |

ತುಮಕೂರು: ಜಿಲ್ಲೆಯ ಹಿರಿಯ ಸಾಹಿತಿ, ದಲಿತ ಪರ ಹೋರಾಟಗಾರ, ಜನಪರ ಸಾಮಾಜಿಕ ಚಿಂತಕ ಕೆ.ಬಿ.ಸಿದ್ಧಯ್ಯ (64) ಅವರು ಶುಕ್ರವಾರ ಬೆಳಗಿನ ಜಾವ ನಿಧನ ಹೊಂದಿ ದ್ದಾರೆ. ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕೆಂಕೆರೆ ಯಲ್ಲಿ 1954ರಲ್ಲಿ ಬೈಲಪ್ಪ, ಅಂತೂರಮ್ಮ ದಂಪತಿಗೆ ಜನಿಸಿದ್ದ ಕೆ.ಬಿ.ಸಿದ್ದಯ್ಯ, ಮೈಸೂರು ವಿವಿಯಲ್ಲಿ ಇಂಗ್ಲಿಷ್‌ ಎಂಎ ಪದವಿ ಪಡೆದಿದ್ದರು.

Advertisement

ತುಮಕೂರಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್‌ ಭಾಷೆಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಒಂದು ತಿಂಗಳ ಹಿಂದೆ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಕಾರು ಅಪಘಾತವಾಗಿ ಗಾಯಗಳಾಗಿ ದ್ದರಿಂದ ಅಸ್ವಸ್ಥರಾಗಿ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆ ಸೇರಿದ್ದರು. ಶುಕ್ರವಾರ ಬೆಳಗಿನ 4 ಗಂಟೆಗೆ ಚಿಕಿತ್ಸೆ ಫ‌ಲಕಾರಿಯಾಗದೇ ನಿಧನ ಹೊಂದಿದರು. ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಪುತ್ರರನ್ನು ಅವರು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next