Advertisement

ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಪರಿಶೀಲನೆ

10:56 PM Jun 08, 2019 | sudhir |

ಅಜೆಕಾರು: ಕಾರ್ಕಳ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ರೈತರ ಕೃಷಿ ಭೂಮಿಯಲ್ಲಿ ಸಮರ್ಪಕವಾಗಿ ಅನುಷ್ಠಾನ ವಾಗಿರುವ ಬಗ್ಗೆ ಜಿಲ್ಲಾ ಪಂಚಾಯತ್‌ ಕೃಷಿ ಹಾಗೂ ಕೈಗಾರಿಕೆ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ್‌ ಎಸ್‌. ಕೋಟ್ಯಾನ್‌ ಪರಿಶೀಲನೆ ನಡೆಸಿದರು.

Advertisement

ತಾಲೂಕಿನಾದ್ಯಂತ ಅನುಷ್ಠಾನವಾದ ಹನಿ ನೀರಾವರಿ, ಜೇನು ಕೃಷಿ ಅಭಿವೃದ್ಧಿ, ಪ್ರದೇಶ ವಿಸ್ತರಣೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಇತರ ಯೋಜನೆಗಳ ರೈತರ ಕೃಷಿ ಭೂಮಿಗೆ ಜಿಲ್ಲಾ ಪಂಚಾಯತ್‌ ಸದಸ್ಯರು ಭೇಟಿ ನೀಡಿ ಅನುಷ್ಠಾನಗೊಂಡ ಬಗ್ಗೆ ಪರಿಶೀಲನೆ ನಡೆಸಿ ಇಲಾಖೆಯ ಯೋಜನೆಗಳು ತಾಲೂಕಿನ ಕಟ್ಟಕಡೆಯ ರೈತರಿಗೂ ತಲುಪುವಲ್ಲಿ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇÍಕಿ ಭುವನೇಶ್ವರಿ, ತಾಲೂಕಿನ ಹಿರಿಯ ತೋಟಗಾರಿಕಾ ನಿರ್ದೇಶಕ ಶ್ರೀನಿವಾಸ ಬಿ.ವಿ., ಸಹಾಯಕ ತೋಟಗಾರಿಕೆ ಅಧಿಕಾರಿ ಚಿದಾನಂದ ಸಿ. ಕಳಕಾಪುರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next