Advertisement

ಅಂಪಾರು: ವಾಹನದಲ್ಲಿ ಮತದಾರರನ್ನು ಕರೆತರುವ ವಿಚಾರದಲ್ಲಿ ವಾಗ್ವಾದ

09:28 AM Dec 27, 2020 | keerthan |

ಕುಂದಾಪುರ: ಗ್ರಾಮ ಪಂಚಾಯತ್ ನ ಎರಡನೇ ಹಂತದ ಚುನಾವಣೆ ಬಿರುಸಿನಿಂದ‌ ಆರಂಭಗೊಂಡಿದ್ದು, ಮತದಾರರನ್ನು ಕರೆ ತರುವ ವಿಚಾರಕ್ಕೆ ‌ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಅಂಪಾರಿನಲ್ಲಿ ನಡೆದಿದೆ.

Advertisement

ಅಭ್ಯರ್ಥಿಗಳ ಪರ ಬೆಂಬಲಿಗರು ತಮ್ಮ ಖಾಸಗಿ ವಾಹನದಲ್ಲಿ ಮತದಾರರನ್ನು ಕರೆ ತರುತ್ತಿರುವುದನ್ನು ನೋಡಿದ ಪ್ರತಿ ಸ್ಪರ್ಧಿ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಎರಡು ಗುಂಪುಗಳ‌ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ಬಂದು ಘಟನೆಯನ್ನು ತಿಳಿಸಿಗೊಳಿಸಿದರು.

ಇದನ್ನೂ ಓದಿ:ಎರಡನೇ ಹಂತದ ಹಳ್ಳಿ ಫೈಟ್: ಕರಾವಳಿಯಲ್ಲಿ ಮುಂಜಾನೆಯಿಂದಲೇ ಉತ್ಸಾಹ ತೋರಿದ ಮತದಾರರು

ಕುಂದಾಪುರ ತಾಲೂಕಿನ 43 ಗ್ರಾ.ಪಂ.ಗಳ ಒಟ್ಟು 554 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಪೈಕಿ 24 ಕಡೆಗಳಲ್ಲಿ ಅವಿರೋಧ ಆಯ್ಕೆಯಾಗಿದೆ. ಉಳಿದ 530 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 1,262 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next