Advertisement

ಬೆಳ್ತಂಗಡಿ: ಗರ್ಡಾಡಿ ಬಳಿ ಕಾರು-ಖಾಸಗಿ ಬಸ್ ಅಪಘಾತ; ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ್ಯು

12:39 PM Jan 01, 2023 | Team Udayavani |

ಬೆಳ್ತಂಗಡಿ: ಕಾರು ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ಗುರುವಾಯನಕೆರೆಯಿಂದ ವೇಣೂರು ಮಾರ್ಗವಾಗಿ ಸಾಗುವ ಗರ್ಡಾಡಿಯ ಕುಂಡದಬೆಟ್ಟು ಬಳಿ ಜ.1 ರಂದು ನಡೆದಿದೆ.

Advertisement

ಸೂರಲ್ಪಾಡಿ ನಿವಾಸಿ ಅಬ್ದುಲ್ ಹಮೀದ್ ಯಾನೆ ನೌಶದ್ ಹಾಜಿ ಹಾಗೂ ಉಳಾಯಿಬೆಟ್ಟು ನಿವಾಸಿ ಕಾರು ಚಾಲಕ ಮಹಮ್ಮದ್ ಮುಶ್ರಫ್ ಮೃತಪಟ್ಟವರು.

ಬೆಳ್ತಂಗಡಿಯಿಂದ ವೇಣೂರು ಮಾರ್ಗವಾಗಿ ಮೂಡುಬಿದ್ರೆ ಸಾಗುವ ಬಸ್ ಹಾಗೂ ವೇಣೂರಿನಿಂದ-ಗುರುವಾಯನಕೆರೆ ಬರುವ ಕಾರು ಗರ್ಡಾಡಿ ಕುಂಡದಬೆಟ್ಟು (ಗೋಳಿಯಂಗಡಿ) ನಡುವೆ ಮುಖಾಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದವರು ಮೂಲತಃ ಬಜ್ಪೆ ನಿವಾಸಿಯವರಾಗಿದ್ದು, ಸಂಪೂರ್ಣ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

Advertisement

ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಸಿಬಂದಿ ಸ್ಥಳಕ್ಕೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next