Advertisement

ವೆಲ್ಲೂರು ಲೋಕಸಭಾ ಚುನಾವಣೆ ರದ್ದು

02:40 AM Apr 17, 2019 | Team Udayavani |

ಹೊಸದಿಲ್ಲಿ: ತಮಿಳುನಾಡಿನ ವೆಲ್ಲೂರಿನಲ್ಲಿ ಎ.18ರಂದು ನಡೆಯಬೇಕಾಗಿದ್ದ ಲೋಕಸಭಾ ಚುನಾವಣೆಯನ್ನು ರದ್ದುಗೊಳಿಸಲಾಗಿದೆ. ದೇಶದ ಲೋಕಸಭಾ ಚುನಾವಣ ಇತಿಹಾಸದಲ್ಲೇ ಮೊದಲ ಬಾರಿಗೆ ಚುನಾವಣೆ ರದ್ದುಗೊಳಿಸಲ್ಪಟ್ಟ ಕ್ಷೇತ್ರ ವೆಂಬ ಕುಖ್ಯಾತಿಗೆ ವೆಲ್ಲೂರು ಪಾತ್ರವಾಗಿದೆ. ಆದರೆ ಇಲ್ಲಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ನಿಗದಿಯಾದಂತೆ ನಡೆಯಲಿದೆ.

Advertisement

ಮಾ. 29ರಂದು ಡಿಎಂಕೆಯ ನಾಯಕ ದುರೈ ಮುರುಗನ್‌ ಪುತ್ರ ಕಾತಿರ್‌ ಆನಂದ್‌ ನಿವಾಸದಲ್ಲಿ 11 ಲಕ್ಷ ರೂ.ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಜತೆಗೆ ಎ. 1ರಂದು ದುರೈಮುರುಗನ್‌ ಅವರಿಗೆ ಸೇರಿದ ಕಾಲೇಜಿನಿಂದ ಸಾಗಿಸಲಾಗಿತ್ತು ಎನ್ನಲಾಗಿದ್ದ 11.53 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಜತೆಗೆ ವಿವಿಧೆಡೆ ನಡೆದ ದಾಳಿಗಳಿಂದ 2,500 ಕೋಟಿ ರೂ. ಮೊತ್ತದ ಮಾದಕ ದ್ರವ್ಯಗಳು, ಮದ್ಯ, ಬೆಲೆಬಾಳುವ ಲೋಹ, ಉಡುಗೊರೆಗಳನ್ನು ಜಪ್ತಿ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next