Advertisement

ತಗ್ಗದ ಜನರ ಸಂಚಾರ; ವಾಹನ ದಟ್ಟಣೆ

09:00 PM May 29, 2021 | Team Udayavani |

ರಾಯಚೂರು: ಜನತಾ ಕಫೂÂì ಕಟ್ಟುನಿಟ್ಟಾಗಿ ಜಾರಿ ಮಾಡಿದ್ದಾಗ್ಯೂ ನಗರದಲ್ಲಿ ದಿನೇ-ದಿನೇ ವಾಹನ ದಟ್ಟಣೆ ಮಾತ್ರ ಹೆಚ್ಚುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಎಸ್ಪಿ, ಹೆಚ್ಚುವರಿ ಎಸ್‌ಪಿಯೇ ಲಾಠಿ ಹಿಡಿದು ಸಂಚಾರ ನಿಯಂತ್ರಣದಲ್ಲಿ ತೊಡಗಿದ್ದು ಕಂಡು ಬಂತು.

Advertisement

ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕೆ ಜಿಲ್ಲಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ತುರ್ತು ಕೆಲಸಗಳಿದ್ದರೆ ಮಾತ್ರ ಓಡಾಡುವಂತೆ ತಿಳಿಸಲಾಗಿದೆ. ಆದರೆ, ನಿತ್ಯ ನಾನಾ ಕಾರಣ ಹೇಳಿ ಓಡಾಡುವವರ ಸಂಖ್ಯೆ ಹೆಚ್ಚಾಗಿರುವುದು ಪೊಲೀಸರ ತಾಳ್ಮೆ ಪರೀಕ್ಷೆ ಮಾಡುವಂತಾಗಿದೆ.

ಇದೇ ಕಾರಣಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಪ್ರಕಾಶ ನಿಕ್ಕಂ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಶ್ರೀಹರಿಬಾಬು ನೇತೃತ್ವದಲ್ಲಿ ಸಂಚಾರ ನಿಯಂತ್ರಣಕ್ಕೆ ಒತ್ತು ನೀಡಲಾಗಿತ್ತು. ಸಣ್ಣ ಪುಟ್ಟ ಕಾರಣ ಹೇಳುವವರನ್ನು ಮುಲಾಜಿಲ್ಲದೇ ಹಿಂದಕ್ಕೆ ಕಳುಹಿಸಿದರೆ, ಅನೇಕರ ವಾಹನ ವಶಕ್ಕೆ ಪಡೆದು ದಂಡ ಹಾಕಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next