Advertisement

ವಾಹನಗಳ ತಪಾಸಣೆ

01:37 PM May 05, 2018 | |

ನಾಲತವಾಡ: ಪಟ್ಟಣದ ವಡಗೇರಿ ಕ್ರಾಸ್‌ ಹತ್ತಿರ ಚುನಾವಣಾಧಿಕಾರಿಗಳು ಶುಕ್ರವಾರ ಹೊಸದಾಗಿ ಚೆಕ್‌ಪೋಸ್ಟ್‌ ಪ್ರಾರಂಭಿಸಿ ವಾಹನಗಳ ತಪಾಸಣೆ ನಡೆಸತೊಡಗಿದ್ದಾರೆ. ಈ ಮೊದಲು 7 ಕಿ.ಮೀ. ಅಂತರದಲ್ಲಿರುವ ನಾರಾಯಣಪುರ ಸರ್ಕಲ್‌ನಲ್ಲಿ ಒಂದೇ ಚೆಕ್‌ಪೋಸ್ಟ್‌ ಇತ್ತು. ಇದರಿಂದಾಗಿ ನಾಲತವಾಡದಿಂದ ರಾಯಚೂರು, ಬಳ್ಳಾರಿ, ಯಾದಗಿರಿ ಮುಂತಾದ ಭಾಗಗಳಿಗೆ ಹೋಗಲು ಒಳದಾರಿಗಳು ಬಳಕೆ ಆಗುತ್ತಿದ್ದವು.

Advertisement

ಒಳದಾರಿ ಮೂಲಕ ಅಕ್ರಮ ನಡೆಯುವ ಅಪಾಯ ಅರಿತ ಅಧಿಕಾರಿಗಳು ಈ ಕ್ರಮ ಕೈಗೊಂಡು ಅಕ್ರಮ ತಡೆಗಟ್ಟಲು
ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದಾರೆ. ಇಲ್ಲಿನ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಇವರೊಂದಿಗೆ ಇಂಡೋ ಟಿಬೇಟಿಯನ್‌ ಬಾರ್ಡರ್‌ ಸೆಕ್ಯೂರಿಟಿ ಸೈನಿಕರನ್ನು ತಪಾಸಣೆಗೆ ನಿಯೋಜಿಸಲಾಗಿದೆ. ಇವರು ಈ ಮಾರ್ಗದಲ್ಲಿ ಬರುವ ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಿ ಯಾವುದೇ ರೀತಿಯಲ್ಲಿ ಚುನಾವಣಾ ಅಕ್ರಮ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next