Advertisement

ಅಪರಚಿತ ವಾಹನ ಹಿಟ್ & ರನ್: ರಬಕವಿ ಯುವಕ ದುರ್ಮರಣ

08:02 PM Feb 16, 2024 | Team Udayavani |

ಕುಷ್ಟಗಿ: ಕುಷ್ಟಗಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಸಜ್ಜಿರೊಟ್ಟಿ ಡಾಬಾದ ಬಳಿ ಬೆಳಗ್ಗೆ 35 ವರ್ಷದ ರಕ್ತಸಿಕ್ಕವಾದ ಯುವಕನ ಶವ ಶುಕ್ರವಾರ ಪತ್ತೆಯಾಗಿದೆ.

Advertisement

ಹೆದ್ದಾರಿ ಪಕ್ಕದಲ್ಲಿ ಅನಾಥವಾಗಿ ಬಿದ್ದಿದ್ದ ಯುವಕನ ಶವವನ್ನು NHAI ಹೈವೇ ಆ್ಯಂಬ್ಯುಲೆನ್ಸ್ ನವರು ಕುಷ್ಟಗಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಮೃತ ಯುವಕನ ಜೇಬಿನಲ್ಲಿದ್ದ ಕೀಪ್ಯಾಡ್ ಮೊಬೈಲ್ ಮೂಲಕ ಅವರ ಕುಟುಂಬದವರನ್ನು ಸಂಪರ್ಕಿಸಿದ್ದಾರೆ. ಮೃತ ಯುವಕ ರಬಕವಿ ಹತ್ತಿರ ಕುಲಹಳ್ಳಿ ಗ್ರಾಮದ ನಾಗೇಶ ಕಲ್ಲಪ್ಪ ಮಾದರ ಎಂಬುದು ಗೊತ್ತಾಗಿದೆ. ನಾಗೇಶ ಮಾದರ ಅಪರಚಿತ ವಾಹನ ಢಿಕ್ಕಿಯಿಂದ ಮೃತಪಟ್ಟ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next