Advertisement

ಚೆನ್ನೈ: ತರಕಾರಿ ಮಾರುಕಟ್ಟೆಯಲ್ಲಿ ಸೋಂಕು ನಿವಾರಕ ಸುರಂಗ ಸ್ಥಾಪನೆ

05:11 PM Apr 04, 2020 | Hari Prasad |

ಚೆನ್ನೈ: ತಮಿಳುನಾಡಿನ ತಿರುಪ್ಪುರ್‌ ಜಿಲ್ಲೆಯ ತೆನ್ನಮ್‌ಪಾಲ್ಯಂ ತರಕಾರಿ ಮಾರುಕಟ್ಟೆಯಲ್ಲಿ ಕೊರೊನಾ ತಡೆಗೆ ‘ಸೋಂಕು ನಿವಾರಕ ಸುರಂಗ’ ಸ್ಥಾಪಿಸಲಾಗಿದ್ದು, ಪ್ರತಿಯೊಬ್ಬರೂ ಈ ಸುರಂಗದ ಮೂಲಕವೇ ಮಾರುಕಟ್ಟೆಯನ್ನು ಪ್ರವೇಶಿಸಬೇಕಾಗಿದೆ. ಇಲ್ಲಿ ಹಾದು ಹೋಗುವ ಜನರಿಗೆ ನೀರಿನೊಂದಿಗೆ ಮಿಶ್ರಣ ಮಾಡಿರುವ ರಾಸಾಯನಿಕ ದ್ರಾವಣವನ್ನು ಸಿಂಪಡಿಸಲಾಗುತ್ತಿದೆ.

Advertisement

19 ಅಡಿ ಉದ್ದ ಹಾಗೂ 5 ಅಡಿ ಅಗಲದ ಸುರಂಗವನ್ನು ತೆರೆಯಲಾಗಿದ್ದು, ಪ್ರತಿಯೊಬ್ಬರಿಗೂ ಕನಿಷ್ಠ 5 ಸೆಕೆಂಡ್‌ಗಳ ಕಾಲ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಿದ ಬಳಿಕವೇ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಸಮೀಪದಲ್ಲಿ ರಾಸಾಯನಿಕ ದ್ರಾವಣ ಮಿಶ್ರಿತ ನೀರು ಇರುವ ಟ್ಯಾಂಕರ್‌ ನಿಲ್ಲಿಸಲಾಗಿದೆ.

ಇದರಿಂದ ಜನರಿಗೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ವೈದ್ಯರಿಂದ ಪರೀಕ್ಷಿಸಿದ ಬಳಿಕವೇ ಈ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಒಂದು ಸುರಂಗಕ್ಕೆ ಲಕ್ಷ ರೂ. ಖರ್ಚು ಬರುತ್ತದೆ. ಜನನಿಬಿಡ 10 ಸ್ಥಳಗಳಲ್ಲಿ ಇದನ್ನು ಅಳವಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next