Advertisement

ವೀರಶೈವ-ಲಿಂಗಾಯತ ಒಡೆಯುವ ಪ್ರಯತ್ನ ಸಫಲವಾಗಲ್ಲ: ಮಿರ್ಜಿ

06:30 AM Oct 01, 2018 | |

ದಾವಣಗೆರೆ: ವೀರಶೈವ-ಲಿಂಗಾಯತ ಎಂದಿದ್ದರೂ ಒಂದೇ. ವೀರಶೈವ-ಲಿಂಗಾಯತ ವಿಭಜನೆ ಮಾಡುವ ಪ್ರಯತ್ನ ಈಗಲ್ಲ, ಯಾವಾಗಲೂ ಸಫಲವಾಗಲ್ಲ ಎಂದು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಜ್ಯೋತಿ ಪ್ರಕಾಶ್‌ ಮಿರ್ಜಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಖೀಲ ಭಾರತ ವೀರಶೈವ ಮಹಾಸಭೆ ಸಹ ವೀರಶೈವ-ಲಿಂಗಾಯತ ಒಂದೇ ಎಂದು ಹೇಳಿದೆ.

ತುಮಕೂರಿನ ಡಾ| ಶಿವಕುಮಾರ ಸ್ವಾಮೀಜಿಯವರು ಸಹ ಅದೇ ಮಾತನ್ನು ಹೇಳಿದ್ದಾರೆ. ಕಳೆದ ಸರ್ಕಾರದ ಅವಧಿಯಲ್ಲಿ ವೀರಶೈವ-ಲಿಂಗಾಯತ ಎಂದು ಸಮಾಜವನ್ನು ಒಡೆಯುವ ಕೆಲಸ ನಡೆಯಿತು.

ಅದರಲ್ಲಿ ತೊಡಗಿಸಿಕೊಂಡವರು ಸೋಲು ಕಂಡರು.ಸರ್ಕಾರವೂ ಇದರಲ್ಲಿ ವಿಫಲವಾಯಿತು. ಹೀಗಾಗಿ,ವೀರಶೈವ-ಲಿಂಗಾಯತ ಎಂದು ಸಮಾಜ ಒಡೆಯುವ ಕೆಲಸಕ್ಕೆ ಯಾರೇ ಮುಂದಾದರೂ ಸಫಲತೆ ಸಿಗಲ್ಲ ಎಂದು ದೃಢ ವಿಶ್ವಾಸದಿಂದ ಹೇಳಿದರು.

ವೀರಶೈವ-ಲಿಂಗಾಯತರು ಒಗ್ಗಟ್ಟಾಗಿದ್ದರೆ ನಮ್ಮವರೇ ಮುಖ್ಯಮಂತ್ರಿ ಆಗುತ್ತಾರೆ. ಆ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕು ಎಂಬುದು ತಮ್ಮ ಆಶಯ. ಯಾವುದೇ ಪಕ್ಷದಲ್ಲೇ ಇರಲಿ.

Advertisement

ವೀರಶೈವ-ಲಿಂಗಾಯತ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು.ಚುನಾವಣೆಯಲ್ಲೂ ಅಷ್ಟೇ. ಯಾವ ಪಕ್ಷ ನಮಗೆ ಸ್ಪಂದಿಸುತ್ತದೆಯೋ ಅಂತಹ ಪಕ್ಷದ ಪರ ಒಲವು ಸಹಜವಾಗಿಯೆ ಇರುತ್ತದೆ. ಆದರೆ, ಇಂತದ್ದೇ ಪಕ್ಷ, ಅಭ್ಯರ್ಥಿ ಎಂದು
ಹೇಳಲಿಕ್ಕಾಗದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next