Advertisement

Tamil Nadu ಕೃಷ್ಣಗಿರಿಯಲ್ಲಿ ಎನ್‌ಟಿಕೆ ಪಕ್ಷದಿಂದ ವೀರಪ್ಪನ್‌ ಪುತ್ರಿ ಸ್ಪರ್ಧೆ

01:16 AM Mar 25, 2024 | Team Udayavani |

ಚೆನ್ನೈ: ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿದ್ಯಾ ರಾಣಿ ಕೃಷ್ಣಗಿರಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಎನ್‌ಟಿಕೆ(ನಾಮ್‌ ತಮಿಳರ್‌ ಕಚ್ಚಿ) ಪಕ್ಷವು ಶನಿವಾರ ತಮಿಳು ನಾಡು ಮತ್ತು ಪುದುಚೇರಿಯ 40 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕೃಷ್ಣಗಿರಿಯಿಂದ ವಿದ್ಯಾರಿಗೆ ಅವಕಾಶ ನೀಡಿದೆ.

Advertisement

ಎನ್‌ಟಿಕೆ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಗೊಂಡಿರುವ ವಿದ್ಯಾ ರಾಣಿ ಅವರು ಮೊದಲು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷೆ ಆಗಿದ್ದರು. ಎಲ್‌ಟಿಟಿಇ ಸಂಸ್ಥಾಪಕ ವಿ.ಪ್ರಭಾಕರನ್‌ ಸಿದ್ಧಾಂತಗಳಿಂದ ಪ್ರೇರಿತ ಗೊಂಡಿರುವ ಎನ್‌ಟಿಕೆಯನ್ನು ನಟ, ನಿರ್ದೇಶಕ ಸೀಮನ್‌ ಮುನ್ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next