Advertisement

Veerappa Moily: ಸಚಿವರು, ಶಾಸಕರ ಮಕ್ಕಳು, ಸಂಬಂಧಿಕರಿಗೆ ಟಿಕೆಟ್‌: ಮೊಯ್ಲಿ

08:44 PM Mar 21, 2024 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅನೇಕ ಸಚಿವರು, ಶಾಸಕರ ಮಕ್ಕಳು, ಸಂಬಂಧಿಕರಿಗೆ ಟಿಕೆಟ್‌ ನೀಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ , ಭ್ರಷ್ಟಾಚಾರ, ವಾಮಮಾರ್ಗದಲ್ಲಿ ಟಿಕೆಟ್‌ ಪಡೆಯುವುದಿಲ್ಲ ಎಂದರು.

Advertisement

ನಗರದ ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಗೆ ವೀಕ್ಷಕರ ಸಭೆಯಲ್ಲಿ ಶೇ.95 ಮುಖಂಡರು, ಶಾಸಕರು ನನ್ನ ಹೆಸರನ್ನೇ ಶಿಫಾರಸು ಮಾಡಿದ್ದು, ನನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ.ಕಳೆದ ಬಾರಿ ಸೋತರೂ ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ. ಚುನಾವಣೆಗಾಗಿ ಗಿಮಿಕ್‌ ಮಾಡುವುದು ನನಗೆ ಬರಲ್ಲ ಎಂದು ಹೇಳಿದರು.

ನನ್ನ ರಾಜಕೀಯ ಜೀವನ ಕಾಂಗ್ರೆಸ್‌ನಲ್ಲಿ ಆರಂಭವಾಗಿದೆ. ಕಾಂಗ್ರೆಸ್‌ನಲ್ಲಿ ಅಂತ್ಯವಾಗಲಿದೆ. ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿಗಳಾಗಿ ಸಾಕಷ್ಟು ಅಧಿಕಾರ ಅನುಭವಿಸಿದ ಅನೇಕರು ಬೇರೆ ಪಕ್ಷಗಳಿಗೆ ಹೋದರು. ಆದರೆ, ನನಗೆ ಎರಡು ಬಾರಿ ಟಿಎಂಸಿ ಪಕ್ಷ ರಾಜ್ಯಸಭೆ ಸ್ಥಾನದ ಆಫ‌ರ್‌ ಕೊಟ್ಟರೂ ನಾನು ಹೋಗಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next