Advertisement

ವೀರಬಸಪ್ಪ ಪಾಟೀಲ ಸಮಾಜ ಸೇವೆ ಮಾದರಿ

10:21 AM Oct 21, 2021 | Team Udayavani |

ಭಾಲ್ಕಿ: ತಾಲೂಕಿನ ಖಟಕ್‌ ಚಿಂಚೋಳಿ ಗ್ರಾಮದ ನೀಲಮ್ಮ ವೀರಬಸಪ್ಪ ಪಾಟೀಲ ಕಲ್ಯಾಣ ಮಂಟಪಕ್ಕೆ ಬುಧವಾರ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದರು.

Advertisement

ಮಹಾರಾಷ್ಟ್ರದ ದೇಗಲೂರಿನಲ್ಲಿನ ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಅವರು, ಖಟಕ್‌ ಚಿಂಚೋಳಿ ಕ್ರಾಸ್‌ ಸಮೀಪದ ನೀಲಮ್ಮ ವೀರಬಸಪ್ಪ ಪಾಟೀಲ ಕಲ್ಯಾಣ ಮಂಟಪಕ್ಕೆ ನೀಡಿ ಪಾಟೀಲ ಕುಟುಂಬಸ್ಥರಿಂದ ಸನ್ಮಾನ ಸ್ವೀಕರಿಸಿದರು.

ಬಳಿಕ ಮಾತನಾಡಿದ ಖರ್ಗೆ, ದಿವಂಗತ ವೀರಬಸಪ್ಪ ಪಾಟೀಲ ಅವರು ತಮ್ಮ ಜೀವಿತಾವ ಧಿಯಲ್ಲಿ ರಾಜಕೀಯ ಕ್ಷೇತ್ರ ಮತ್ತು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ನಮ್ಮ ಕುಟುಂಬಕ್ಕೆ ಅತ್ಯಂತ ಆತ್ಮೀಯರಾಗಿದ್ದ ವೀರಬಸಪ್ಪ ಪಾಟೀಲ ಅವರು ಬಸವ ತತ್ವವನ್ನು ಜೀವನದುದ್ದಕ್ಕೂ ಮೈಗೂಡಿಸಿಕೊಂಡು ಕೊಡುಗೈ ದಾನಿಯಾಗಿ ಸಮಾಜಕ್ಕೆ ಕೈಲಾದಷ್ಟು ಸಹಾಯ ಮಾಡಿ ಈ ಭಾಗದ ಜನರ ಮನಸ್ಸು ಗೆದ್ದಿದ್ದರು ಎಂದರು.

ಈ ಸಂದರ್ಭದಲ್ಲಿ ನೀಲಮ್ಮ ವೀರಬಸಪ್ಪ ಪಾಟೀಲ, ವೀರಬಸಪ್ಪ ಪಾಟೀಲ ಅವರ ಸಹೋದರ ಪುತ್ರ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಮುಗನೂರ್‌, ವೀರೇಂದ್ರ ಪಾಟೀಲ, ರಾಜಕುಮಾರ ಪಾಟೀಲ ಸೇರಿದಂತೆ ಖರ್ಗೆ ಬೆಂಬಲಿಗರು, ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next