Advertisement

ವೀರಭದ್ರಸ್ವಾಮಿ ದೇವಸ್ಥಾನ ಹಿರಿಯಡಕ: ಇಂದು ಸಿರಿಜಾತ್ರೆ, ಮೇ 8ರಂದು ಶ್ರೀಮನ್ಮಹಾರಥೋತ್ಸವ

10:55 PM May 04, 2023 | Team Udayavani |

ಹೆಬ್ರಿ: ಹಿರಿಯಡಕ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮೇ 5ರಿಂದ ಆರಂಭಗೊಂಡು ಮೇ 10ರ ವರೆಗೆ ಧ್ವಜಾರೋಹಣಾದಿ ಮಹೋತ್ಸವಗಳು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಲಿದ್ದು, ಮೇ 5ರಂದು ಸಿರಿಜಾತ್ರೆ, ಮೇ 8ರಂದು ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ.

Advertisement

ಮೇ 5ರಂದು ಬೆಳಗ್ಗೆ ಧ್ವಜಾರೋಹಣದೊಂದಿಗೆ ಜಾತ್ರೆ ಆರಂಭಗೊಂಡು ಸಂಜೆ 6.30ರಿಂದ ಪೂàರ್ಣಿಮಾ ಉತ್ಸವ, ರಾತ್ರಿ ಬಲಿ, 9ರಿಂದ ಹಾಲು ಹಬ್ಬ, ಆರಾಧನಾ ಪೂಜೆ, ಸವಾರಿ ಬಲಿ, ಬ್ರಹ್ಮಮಂಡಲ, ಭೂತಬಲಿ, ಮೇ 8ರಂದು ಮಧ್ಯಾಹ್ನ 12.15ಕ್ಕೆ ರಥಾರೋಹಣ, ಸಂಜೆ 6ರಿಂದ ಶ್ರೀ ಮನ್ಮಹಾರಥೋತ್ಸವ, ಭೂತಬಲಿ, ಕವಾಟಪೂರಣ ನಡೆಯಲಿದೆ.

ಮೇ 10ರಂದು ಬೆಳಗ್ಗೆ ಮಹಾಸಂಪ್ರೋಕ್ಷಣೆ, ಚಂಡಿಕಾಯಾಗ, ಮಾರಿಪೂಜಾ ಸಮಾರಾಧನೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ರವಿ ಎಸ್‌.ಅಂಗಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next