Advertisement

ವೀರ ಮಹಾಂತ ಶಿವಾಚಾರ್ಯರ ಪಟ್ಟಾಧಿಕಾರ

10:04 AM Feb 08, 2018 | |

ಅಫಜಲಪುರ: ತಾಲೂಕಿನ ಚಿನ್ಮಯಗಿರಿಯಲ್ಲಿ ಮೂರು ದಿನಗಳಿಂದ ಭಕ್ತರ ಸಂಭ್ರಮವೋ ಸಂಭ್ರಮ. ನೂತನ ಶ್ರೀ ವೀರ ಮಹಾಂತ ಶಿವಾಚಾರ್ಯರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮಗಳನ್ನು ಕಣ್ತುಂಬ ಕಂಡು ಭಕ್ತರು ಪುನೀತರಾದರು.

Advertisement

50 ವರ್ಷಗಳ ಹಿಂದೆ ಸಿದ್ದರಾಮ ಶಿವಾಚಾರ್ಯರ ಪಟ್ಟಾಧಿಕಾರ ಕಾರ್ಯಕ್ರಮ ನಡೆದಿತ್ತು. ಆದರೆ ಅದನ್ನು ಕಂಡವರು ಕಡಿಮೆ ಜನ. ಇಂದಿನ ಈ ಭಕ್ತ ಸಮೂಹ ಅದ್ಬುತವಾಗಿ ನಡೆದ ಪಟ್ಟಾ ಧಿಕಾರ ಮಹೋತ್ಸವವನ್ನು ಕಂಡು ಪುಳಕಿತರಾದರು. ನೂತನ ಶ್ರೀಗಳ ಆನೆ ಮೇಲಿನ ಮೆರವಣಿಗೆ ಹಾಗೂ ಅಡ್ಡ ಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.

ನೂತನವಾಗಿ ನಿರ್ಮಿಸಲಾದ ದೇವಸ್ಥಾನದ ಕಟ್ಟಡ ಹಾಗೂ ಬೆಳ್ಳಿ ಮೂರ್ತಿ ಸ್ಥಾಪನೆ, ಲಿಂಗ ಸ್ಥಾಪನೆ, ಹಿರಿಯ ಶ್ರೀಗಳ ಸಂಕಲ್ಪದಂತೆ ಭಕ್ತರ ಸಹಾಯದೊಂದಿಗೆ ಅದ್ಬುತವಾಗಿ ನಿರ್ಮಾಣವಾಗಿರುವುದನ್ನು ಕಂಡು ಭಕ್ತರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಶ್ರೀ ಗುರು ವಿದ್ಯಾಪೀಠದ ಅಧ್ಯಕ್ಷ ಬಸವರಾಜ ದಿಗ್ಗಾವಿ ಹಾಗೂ ಬಸವರಾಜ ಸುಂಟನೂರ ಅವರು ಪ್ರಸಾದ ಸೇವೆ ಸಲ್ಲಿಸಿದರು. ಚವಡಾಪುರ ಗ್ರಾಪಂ ಅಧ್ಯಕ್ಷೆ ಮಾದೇವಿ ಸಾಯಬಣ್ಣ ಜಮಾದಾರ ಹಾಗೂ ಸಹೋದರರು ನೂತನ ಗೋಪುರ ಕಳಸ ದಾನವಾಗಿ ನೀಡಿದ್ದಾರೆ ಹಾಗೂ ಶರಣಯ್ಯ ಸ್ವಾಮಿ ಲಿಂಗ ನೀಡಿದ್ದಾರೆ. ಜೇವರ್ಗಿ ತಾಪಂ ಅಧ್ಯಕ್ಷೆ ಚಂದಮ್ಮ ಸಂಗಣ್ಣ ಹಣಮಂತಗೋಳ ಮೂರ್ತಿ ದಾನ ಮಾಡಿದ್ದು ಕಾರ್ಯಕ್ರಮದ ಮೆರಗು ಹೆಚ್ಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next