Advertisement

ಹುಬ್ಬಳ್ಳಿಯಲ್ಲಿ ವೇದಾಂತ ಕಂಪನಿಯ ಆಸ್ಪತ್ರೆ ಉದ್ಘಾಟನೆ

03:45 PM Jun 12, 2021 | Team Udayavani |

ಹುಬ್ಬಳ್ಳಿ: ವೇದಾಂತ ಕಂಪನಿಯ ರಾಜ್ಯದ ಎರಡನೇ ಹಾಗೂ ಉತ್ತರ ಕರ್ನಾಟಕ ದ ಮೊದಲ ಕೋವಿಡ್ ಆಸ್ಪತ್ರೆ ಶನಿವಾರ, ಇಲ್ಲಿನ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಲೋಕಾರ್ಪಣೆಗೊಂಡಿತು.

Advertisement

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೂತನ ಆಸ್ಪತ್ರೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಮನವಿ ಜತೆಗೆ ನನ್ನ ವಿಶೇಷ ಮನವಿ ಮೇರೆಗೆ, ವೇದಾಂತ ಕಂಪೆನ ಚೇರ್ಮನ್ ಅನಿಲ್ ಅಗರ್ವಾಲ್ ಅವರು ಕರ್ನಾಟಕದಲ್ಲಿ ಎರಡು ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಆರಂಭವಾಗಿದ್ದು, ಹುಬ್ಬಳ್ಳಿಯಲ್ಲಿ ಇಂದು ಲೋಕಾರ್ಪಣೆ ಗೊಂಡಿದೆ ಎಂದರು.

ವೇದಾಂತ ಕಂಪನ ಸಿಇಒ ಎಸ್.ಮುಜಂದಾರ ಮಾತನಾಡಿ, ಕೋವಿಡ್ ಸಂಕಷ್ಟದಲ್ಲಿ ವಿವಿಧ ರೀತಿಯ ನೆರವಿಗೆ ವೇದಾಂತ ಕಂಪನಿ ಮುಂದಾಗಿದೆ. ಕೋವಿಡ್ ನಿಯಂತ್ರಣಕ್ಕೆ ದೇಶದಲ್ಲಿ 10 ಆಸ್ಪತ್ರೆಗಳನ್ನು ನಿರ್ಮಿಸುತ್ತಿದ್ದು, ಕರ್ನಾಟಕದ ಚಿತ್ರದುರ್ಗ, ಹುಬ್ಬಳಿ ಆಸ್ಪತ್ರೆಗಳು ಉದ್ಘಾಟನೆಗೊಂಡಿವೆ ಎಂದರು.

ಇದನ್ನೂ ಓದಿ:‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

ಹುಬ್ಬಳ್ಳಿ ಆಸ್ಪತ್ರೆ 100 ಹಾಸಿಗೆಯದ್ದಾಗಿದೆ. ಇದರಲ್ಲಿ 80 ಆಕ್ಸಿಜನ್ ಯುಕ್ತ, 20 ಐಸಿಯು ಬೆಡ್ ಗಳಾಗಿವೆ ಎಂದರು.

Advertisement

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಇನ್ನಿತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next