Advertisement

ಲೇಖಕಿ ವಸುಮತಿ ಉಡುಪರಿಗೆ ರಾಜಲಕ್ಷ್ಮಿ ಬರಗೂರು ದತ್ತಿ ಪ್ರಶಸ್ತಿ ಪ್ರದಾನ

12:44 PM Jan 19, 2020 | keerthan |

ರಾಯಚೂರು:  ಶ್ರೀಮತಿ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ದತ್ತಿ ಪ್ರಶಸ್ತಿಯನ್ನು ಖ್ಯಾತ ಲೇಖಕಿ ವಸುಮತಿ ಉಡುಪ ಅವರಿಗೆ ನೀಡಿ ಗೌರವಿಸಲಾಯಿತು.

Advertisement

ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ರವಿವಾರ ಹಮ್ಮಿಕೊಂಡ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲೇಖಕ ಡಾ.ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಲೋಕಾರ್ಪಣೆ ಮಾಡಲಾಯಿತು.

ಡಾ.ಶೀಲಾದಾಸ ಲೇಖಕಿ ಕುರಿತು ಅಭಿನಂದನಾ ನುಡಿಯಾಡಿದರು. ಲೇಖಕರ ಅಮರೇಶ ನುಗಡೋಣಿ, ಹಂಪಿ ವಿವಿ ಕುಲಪತಿ ಪ್ರೊ.ಸ.ಚಿ.ರಮೇಶ, ಎಡಿಸಿ ದುರುಗೇಶ, ಕಸಾಪ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಕಸಾಪ ಕಾರ್ಯದರ್ಶಿಗಳಾದ ಜೆ.ಎಲ್.ಈರಣ್ಣ, ಪತ್ರಕರ್ತೆ ಶ್ರೀದೇವಿ ಕಳಸದ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next