Advertisement

ವಾಸವಿ ಕನ್ನಿಕಾ ಪರಮೇಶ್ವರಿ ಅಗ್ನಿ ಪ್ರವೇಶ-ವಿಶೇಷ ಪೂಜ

05:35 PM Feb 15, 2021 | Team Udayavani |

ಸೈದಾಪುರ: ಆರ್ಯ ವೈಶ್ಯ ಕುಲದೇವತೆ ವಾಸವಿ ಕನ್ನಿಕಾ ಪರಮೇಶ್ವರಿ ಮಾತೆಯು ಅಗ್ನಿ ಪ್ರವೇಶ ಮಾಡಿ ನಂತರ ಸಮಸ್ತ ವೈಶ್ಯ ಸಮಾಜಕ್ಕೆ ಉದ್ದಾರಕ್ಕೆ ದಿವ್ಯ ದರ್ಶನ ನೀಡಿದ ಪುಣ್ಯದಿನ ಇಂದು ಎಂದು ವಾಸವಿ ಮಹಿಳಾ ಸಂಘದ ಕೋಶಾಧ್ಯಕ್ಷೆ ರಾಧ ಸಂಗೊಳಿಗಿ ಹೇಳಿದರು. ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಆರ್ಯ ವೈಶ್ಯ ಮಹಿಳಾ ಸಂಘದಿಂದ ಏರ್ಪಡಿಸಿದ್ದ ವಾಸವಿ ದೇವಿಯ ಅಗ್ನಿ ಪ್ರವೇಶ ದಿನದ ಪ್ರಯುಕ್ತ ಕನ್ನಿಕಾ ಪರಮೇಶ್ವರಿ ದೇವಿಯ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈಶ್ಯ ಸಮಾಜವು ಅಹಿಂಸೆ, ತ್ಯಾಗ ನಂಬಿದ ಜನಾಂಗವಾಗಿದೆ.

Advertisement

ಈ ಸಮಾಜದಲ್ಲಿ ಜನಿಸಿದ ನಾವುಗಳು ಧನ್ಯರು ಎಂದರು. ನಂತರ ವಿದ್ಯಾಥಿಗಳಿಗೆ ಪ್ರಸಾದ ವ್ಯವಸ್ಥೆ ಹಾಗೂ ಕಿರು ಕಾಣಿಕೆ ನೀಡಲಾಯಿತು. ಸಂಘದ ಅಧ್ಯಕ್ಷೆ ವಸಂತಮ್ಮ ಮೀರಿಯಾಲ್‌, ಕಾರ್ಯದರ್ಶಿ ಕೆ.ಪಿ ಸವಿತಾ, ಉಪಾಧ್ಯಕ್ಷೆ ಭಾರತಿ ಗೋವರ್ಧನ, ಸಹ ಕಾರ್ಯದರ್ಶಿ ಶ್ರುತಿ ಭರತ್‌ ಗುಮಡಾಲ್‌, ಉಷಾ ಬನ್ನಯ್ಯ ಕೆ.ಬಿ. ಅನುರಾಧ, ಪಾಡರಂಗಯ್ಯ ಗುಮಡಾಲ್‌, ಕೆ.ಪಿ ಜಯಶ್ರೀ, ವಿಜಯಗೌರಿ ಕೊಲಕೊಂಡ, ಚಂದ್ರಲೇಖಾ, ವಾಣಿ ರಾಮು ಗುಜ್ಜ, ಪದ್ಮಾ
ರಾಜಪಯ್ಯ ಪುರಿ, ಜಾನಕಿ ನರಸಯ್ಯ ಪತ್ತಿ, ರಾಘವೇಂದ್ರ ಮಿರಿಯಾಲ್‌, ಕವಿತಾ ಆನಂದ ಮಿರಿಯಾಲ್‌, ಮಾಧವಿ ಅಶೋಕ, ಮೀನಾಕ್ಷಿ ಶ್ರೀನಿವಾಸ, ಲಕ್ಷ್ಮೀ ಮಂಜುನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next