Advertisement

ವಸಾಯಿ ರೋಡ್‌ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿ: ಕಿಟ್‌ ವಿತರಣೆ

01:53 PM Sep 01, 2021 | Team Udayavani |

ಮುಂಬಯಿ: ವಸಾಯಿ ರೋಡ್‌ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿ ವತಿಯಿಂದ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್‌ ವಿತರಿಸಿ ಸಹಕರಿಸಲಾಯಿತು.

Advertisement

ವಸಾಯಿ ರೋಡ್‌, ವಸಾಯಿ ಗಾಂವ್‌, ನಲಸೋಪರ, ವಿರಾರ್‌ ಪರಿಸರದ ಜಿಎಸ್‌ಬಿ ಸಮಾಜದ ಹಾಗೂ ವಸಾಯಿಯಲ್ಲಿ ಇತರ ಸಮಾಜದ ಒಟ್ಟು 39 ಕುಟುಂಬಗಳಿಗೆ ತಲಾ 1,500 ರೂ. ಗಳ ದಿನಸಿ ಸಾಮಗ್ರಿಗಳ ಕಿಟ್‌ ವಿತರಿಸಲಾಯಿತು. ಸಮಿತಿಯ ವತಿಯಿಂದ ಕಳೆದ 2 ತಿಂಗಳುಗಳಿಂದ ಆಹಾರದ ಕಿಟ್‌ಗಳನ್ನು ಸಮಿತಿಯ ಸದಸ್ಯರು ಹಾಗೂ ಹಿತೈಷಿಗಳ ಸಹಕಾರದಿಂದ ವಿತರಿಸಲಾಗುತ್ತಿದೆ. ಸಮಿತಿಯ ಆಡಳಿತ ಮಂಡಳಿಯ ಸದಸ್ಯರು, ಇತರ ಸದಸ್ಯರು ಹಾಗೂ ಜಿಎಸ್‌ಬಿಎಸ್‌ಬಿ ಪ್ರತಿಷ್ಠಾನ ನಲ ಸೊಪರ ಹಾಗೂ ಜಿಎಸ್‌ಬಿ ಸೇವಾ ಮಂಡಲ ವಿರಾರ್‌ ಇದರ ಆಡಳಿತ ಮಂಡಳಿಯ ಸದಸ್ಯರು ಕಿಟ್‌ಗಳನ್ನು ವಿತರಿಸಿ ಶುಭ ಹಾರೈಸಿದರು.

ಇದನ್ನೂ ಓದಿ:ಹೃದಯಾಘಾತದಿಂದ ನ್ಯಾಯಾಲಯದ ಆವರಣದಲ್ಲೇ ನಗರಸಭಾ ಸದಸ್ಯ ಸಾವು

ಬಾಲಾಜಿ ಸೇವಾ ಸಮಿತಿಯ ಆಡಳಿತ ಮಂಡಳಿಯ ಸದಸ್ಯರಾದ ದೇವೇಂದ್ರ ಭಕ್ತ, ಪುರುಷೋತ್ತಮ ಶೆಣೈ, ಲಕ್ಷ್ಮಣ್‌ ರಾವ್‌, ವಿನಾಯಕ ಪೈ, ಅರವಿಂದ ಹೊನ್ನವರ, ಮನೋಹರ್‌ ಶೆಣೈ, ಶ್ರೀನಿವಾಸ ಪಡಿಯಾರ್‌, ಶ್ರೀಧರ ಪ್ರಭು, ದೇವದಾಸ್‌ ಭಟ್‌, ಸದಾಶಿವ ನಾಯಕ್‌, ರಾಮಚಂದ್ರ ಹೆಗ್ಡೆ, ಜಗದೀಶ್‌ ಕಾಮತ್‌, ವಿ. ಕೆ. ಕಾಮತ್‌, ಅವನಿಕಾಂತ್‌ ಬೋರ್ಕರ್‌, ಮಂಜುನಾಥ ಎಸ್‌. ಪೈ, ಜಿಎಸ್‌ಬಿ ಪ್ರತಿಷ್ಠಾನ ನಲಸೋಪರ ಇದರ ಪದಾಧಿಕಾರಿ ವಿ. ಡಿ. ಕುಡ್ವ ಹಾಗೂ ಜಿಎಸ್‌ಬಿ ಸೇವಾ ಮಂಡಲ ವಿರಾರ್‌ ಇದರ ಪದಾಧಿಕಾರಿಗಳಾದ ಆಶಾ ಪ್ರಭು, ಶಾಲಿನಿ ಪೈ, ಕಸ್ತೂರಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next