Advertisement

ವರುಣಾ: ನೋಟಾ ಅಭಿಯಾನ

06:30 AM Apr 27, 2018 | |

ಮೈಸೂರು: ಯಡಿಯೂರಪ್ಪಪುತ್ರ ಬಿ.ವೈ.ವಿಜಯೇಂದ್ರಗೆ ವರುಣಾ ಕ್ಷೇತ್ರದ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ನೊಂದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಹೆಸರಲ್ಲಿ ಕ್ಷೇತ್ರದಲ್ಲೀಗ ನೋಟಾ ಅಭಿಯಾನ ಶುರುವಾಗಿದೆ.

Advertisement

ನೋಟಾ ಅಭಿಯಾನ ಕರಪತ್ರದಲ್ಲಿ “ಮಿ.ಅನಂತಕುಮಾರ್‌ ಹಾಗೂ ಸಂತೋಷ್‌, ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಿದ ಒಂದೇ ಕಾರಣದಿಂದಾಗಿ ಚಾಮರಾಜ ನಗರ ಮತ್ತು ಮೈಸೂರು ಜಿಲ್ಲೆಯ ಸುಮಾರು 9 ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೂ ಭಂಗವಾಗಬಹುದು, ಇದು ನಿಮಗೆ ತಿಳಿಯಲಿಲ್ಲವೆ’ ಎಂದು ಪ್ರಶ್ನಿಸಲಾಗಿದೆ. ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನು ಮಣ್ಣುಪಾಲು ಮಾಡಿದ ಇವರಿಬ್ಬರ ಗರ್ವಭಂಗಕ್ಕೆ ನೋಟಾ ಚಲಾವಣೆ ಅನಿವಾರ್ಯ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next