Advertisement

ಸಾಮೂಹಿಕ ಸಾರಿಗೆ ವ್ಯವಸ್ಥೆ ಸ್ಥಗಿತ ! ಸದ್ಯಕ್ಕೆ ಬಾರದ ರೈಲುಗಳಿಗೆ ಕಾಯುತ್ತಿರುವವರು!

06:55 PM Apr 18, 2020 | sudhir |

ಎಷ್ಟೋ ದೂರದ ಪ್ರದೇಶಗಳಿಂದ ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬಂದವರೆಲ್ಲರ ಸದ್ಯದ ಆಸೆ ಒಂದೇ. ಅದು ಊರಿಗೆ ಹೋಗಬೇಕೆಂಬುದು. ಇವರ ನಿತ್ಯಕಾಯುವಿಕೆಗೆ ನಿಲಾªಣಕ್ಕೂ ಬೇಸರ ಮೂಡಿರಬಹುದು…

Advertisement

ನವದೆಹಲಿ: ವಾರಣಾಸಿಯ ಪ್ರಮುಖ ರೈಲು ನಿಲ್ದಾಣ ಬಹು ವಿಸ್ತಾರವಾದ ಕಟ್ಟಡ. ಐದು ಶತಮಾನದಿಂದ ಹಲವಾರು ಬಾರಿ ಇಲ್ಲಿ ರೈಲುಗಳಿಗಾಗಿ ಜನರು ಕಾದಿದ್ದಾರೆ. ಕೆಲವೊಮ್ಮೆ ಬಹಳ ತಾಸುಗಳು, ಇನ್ನು ಕೆಲವೊಮ್ಮೆ ಕೆಲವೇ ನಿಮಿಷಗಳು. ಆದರೆ, ಇಷ್ಟು ದಿನ ಕಾದದ್ದು ಇಲ್ಲವೇ ಇಲ್ಲ. ವಿಪರ್ಯಾಸವೆಂದರೆ ಬಾರದ ರೈಲುಗಳಿಗೆ ಕಾಯಲಾಗುತ್ತಿದೆ.

ಎತ್ತರದ ಛಾವಣಿಯ ಕೋಣೆಯೊಳಗೆ ನೂರಾರು ಮಂದಿ ಪ್ರಯಾಣಿಕರು ಮೂರು ವಾರಗಳಿಂದ ಕಾಯುತ್ತಿದ್ದಾರೆ ಇನ್ನೂ ಬಾರದ ರೈಲುಗಳ ನಿರೀಕ್ಷೆಯಲ್ಲಿ. ಕಟ್ಟಡ ಕಾರ್ಮಿಕರು, ಮಕ್ಕಳೊಂದಿಗೆ ಪೋಷಕರು, ಯಾತ್ರಿಕರು, ವಿದ್ಯಾರ್ಥಿಗಳು-ಹೀಗೆ ಎಲ್ಲ ವರ್ಗದವರೂ ಇಲ್ಲಿದ್ದಾರೆ. ಎಲ್ಲರ ಸಂಕಷ್ಟ ಮತ್ತು ಆಸೆ ಒಂದೇ-ತಮ್ಮ ಊರುಗಳಿಗೆ ಹೇಗಾದರೂ ಮಾಡಿ ತೆರಳಬೇಕಿದೆ.

ಕೋವಿಡ್‌-19 ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ರಾಷ್ಟ್ರವ್ಯಾಪಿ ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಘೋಷಿಸಲಾಯಿತು. ಇದ್ದಕ್ಕಿದ್ದಂತೆ ರೈಲು ಸೇರಿದಂತೆ ಸಾಮೂಹಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಾಗ ರೈಲು ನಿಲ್ದಾಣದಲ್ಲಿದ್ದ ಜನರಿಗೆ ಬೇರೆ ಆಯ್ಕೆಯೇ ಇರಲಿಲ್ಲ. ನಿಲ್ದಾಣದಲ್ಲೇ ಉಳಿದುಕೊಳ್ಳಬೇಕಾಯಿತು. ನೂರಾರು ಮೈಲಿ ದೂರದಿಂದ ನಗರಕ್ಕೆ ಬಂದಿದ್ದ ವಲಸಿಗರೂ ಸೇರಿದಂತೆ ಇನ್ನೂ ಯಾವ್ಯಾವುದೋ ಕಾರಣಕ್ಕೆ ಬಂದವರೆಲ್ಲಾ ರೈಲ್ವೆ ನಿಲ್ದಾಣದಲ್ಲೇ ಬಂಧಿಯಾದರು.

ಲಕ್ಷಾಂತರ ಮಂದಿ ಪ್ರಯಾಣಿಕರನ್ನು ನಿಭಾಯಿಸಲು ಒಗ್ಗಿಕೊಂಡಿರುವ ನಿಲ್ದಾಣದ ಸಿಬಂದಿ, ಉಳಿದಿರುವ 50 ಕ್ಕಿಂತ ಕಡಿಮೆ ಪ್ರಯಾಣಿಕರನ್ನು ನೋಡಿಕೊಳ್ಳುವಲ್ಲಿ ನಿರತರಾಗಿ¨ªಾರೆ. ಮೂರು ಹೊತ್ತಿನ ಊಟ, ಬಿಸಿ ಚಹಾ, ಬೆಳಗ್ಗೆ ಯೋಗ ಅಧಿವೇಶನ ಮತ್ತು ಹಿಂದೂ ಮಹಾಕಾವ್ಯಗಳ ರಾತ್ರಿಯ ಪ್ರದರ್ಶನಗಳನ್ನು ಮಾಡಲಾಗುತ್ತದೆ. ಲಾಕ್‌ಡೌನ್‌ ಮಾರ್ಚ್‌ 25 ರಿಂದ ಪ್ರಾರಂಭವಾಗಿ ಮೇ 3 ರವರೆಗೆ ವಿಸ್ತರಿಸಲ್ಪಟ್ಟಿದೆ. ಉದ್ಯೋಗವಿಲ್ಲದೇ ಬದುಕುವ ಅವಕಾಶದ ಕೊರತೆಯ ಭಯದಿಂದ ಕಾರ್ಮಿಕರು ಕಾಲ್ನಡಿಗೆಯಲ್ಲಿ ನಗರಗಳಿಂದ ಹೊರಬಂದಿ¨ªಾರೆ. 1.3 ಬಿಲಿಯನ್‌ ಜನಸಂಖ್ಯೆ ಹೊಂದಿರುವ ಈ ರಾಷ್ಟ್ರದಲ್ಲಿ ಆರ್ಥಿಕತೆ ಸ್ಥಗಿತಗೊಂಡಾಗ ಅನೇಕರು ಹಸಿವಿನಿಂದ ಬಳಲುತ್ತಿರುವುದು ನಿಜ.

Advertisement

ವಾರಣಾಸಿಯ ಮುಖ್ಯ ರೈಲ್ವೇ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರು ದೂರದರ್ಶನದಲ್ಲಿ ಮಹಾಭಾರತ-ರಾಮಾಯಣ ವೀಕ್ಷಿಸುತ್ತಾ ಸಮಯ ನೂಕುತ್ತಿದ್ದಾರೆ. ಲಾಕ್‌ಡೌನ್‌ನಿಂದ ಸಿಲುಕಿರುವವರಿಗೆ ಸ್ಥಳೀಯ ಅಧಿಕಾರಿಯೊಬ್ಬರು ಸಹಾಯದ ಮುಂದಾಳತ್ವ ವಹಿಸಿದ್ದಾರೆ. ಆದರೆ ಇಲ್ಲಿ ಹಲವು ಕಥೆಗಳಿವೆ.

ಮಹಾರಾಷ್ಟ್ರದ ಕಾರ್ಮಿಕ ರಘು ಉತ್ತಮ್‌ ಶಿಂಧೆ (25) ನಾಲ್ಕು ಮಕ್ಕಳು ಸೇರಿದಂತೆ ಅವರ ಕುಟುಂಬದ 10 ಸದಸ್ಯರೊಂದಿಗೆ ಬಿಹಾರ ರಾಜ್ಯದಲ್ಲಿ ಕೇಬಲ್‌ ಹಾಕಲು ಗ್ರಾಹಕರ ಮನೆಗಳಿಗೆ ತೆರಳುತ್ತಿದ್ದರು. ಅವರ ರೈಲು ಮಧ್ಯರಾತ್ರಿಯಲ್ಲಿ ವಾರಣಾಸಿಯ ಹೊರಗಿನ ನಿಲ್ದಾಣದಲ್ಲಿ ನಿಂತು, ಎಲ್ಲರಿಗೂ ಇಳಿಯುವಂತೆ ಆದೇಶಿಸಲಾಯಿತು. ನಗರದ ರೈಲು ನಿಲ್ದಾಣವನ್ನು ತಲುಪಲು ಶಿಂಧೆ ಮತ್ತು ಅವರ ಕುಟುಂಬ ನಾಲ್ಕು ಗಂಟೆಗಳ ಕಾಲ ನಡೆದು ಮತ್ತೂಂದು ರೈಲು ಹಿಡಿಯುವ ಆಶಯದೊಂದಿಗೆ ಇದ್ದರು.
ಸರಕಾರಿ ವಕೀಲ ನರೇಂದ್ರ ಸಿಂಗ್‌ ಕೆಲಸದ ಪ್ರವಾಸದಿಂದ ಹಿಂದಿರುಗುವಾಗ ವಾರಣಾಸಿಯಲ್ಲಿ ಒಂದು ದಿನ ಸ್ಥಳ ವೀಕ್ಷಣೆಗೆಂದು ನಿಂತರು.

ಪ್ರತಿದಿನ ಬೆಳಗ್ಗೆ, ರೈಲ್ವೆ ಸಿಬಂದಿಯೊಬ್ಬರು ಸಿಕ್ಕಿಬಿದ್ದ ಪ್ರಯಾಣಿಕರಿಗಾಗಿ ಯೋಗ ಅಧಿವೇಶನ ನಡೆಸುತ್ತಾರೆ. ಪ್ರಯಾಣಿಕರು ಯೋಗ, ಅನಂತರ ಬೇಯಿಸಿದ ತರಕಾರಿಗಳು ಮತ್ತು ಕರಿದ ಬ್ರೆಡ್‌ನ‌ ಸರಳ ಉಪಹಾರ, ಸಂಜೆ ಊಟ ಮುಗಿಸುತ್ತಾರೆ. ಲೋಹದ ಬೆಂಚುಗಳ ಮೇಲೆ ಅಥವಾ ನೆಲದ ಮೇಲೆ ತೆಳುವಾದ ರಗ್ಗುಗಳನ್ನು ಹಾಸಿಕೊಂಡು ಮಲಗುತ್ತಾರೆ. ಪ್ರತಿಯೊಬ್ಬರೂ ಸರಿ ಸುಮಾರು ಒಂದೇ ಸಮಯಕ್ಕೆ ಮಲಗುತ್ತಾರೆ, ಏಳೂವುದು ಸಹ. ಸಣ್ಣ ಶಬ್ದಗಳೂ ಪ್ರತಿಧ್ವನಿಸುವ ಗುಹೆಯಲ್ಲಿ ಮೌನವಾಗಿರಲು ಪ್ರಯತ್ನಿಸುತ್ತವೆ.

ಇದು ಒಂದು ರೈಲು ನಿಲ್ದಾಣಗಳ ಕಥೆಯಲ್ಲ; ಹಲವು ಊರುಗಳ ಕಥೆ. ಬಹುತೇಕ ನಗರಗಳಲ್ಲಿ ಇಂಥದ್ದೇ ಕಥೆಗಿಳಿವೆ. ಇನ್ನೇನು ಹೊರಟು ಬಿಡಬೇಕು ಎಂದುಕೊಂಡವರೆಲ್ಲಾ ಈಗ ಸುಮ್ಮನೆ ಕುಳಿತಿದ್ದಾರೆ. ಏನೂ ಮಾಡುವಂತಿಲ್ಲ; ಅಸಹಾಯಕತೆಯನ್ನೇ ಹೊದ್ದುಕೊಂಡು ಮಲಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next