Advertisement

ರಾಮನ ಮೌಲ್ಯಗಳು ಸಬ್ಕಾ ಸಾಥ್,ಸಬ್ಕಾ ವಿಕಾಸ್ ಗೆ ಸ್ಫೂರ್ತಿ: ಪ್ರಧಾನಿ ಮೋದಿ

07:31 PM Oct 23, 2022 | Team Udayavani |

ಅಯೋಧ್ಯೆ: ”ಭಗವಾನ್ ರಾಮನು ತನ್ನ ಮಾತುಗಳು, ಆಲೋಚನೆಗಳು ಮತ್ತು ಆಡಳಿತದ ಮೂಲಕ ಮೈಗೂಡಿಸಿಕೊಂಡಿರುವ ಮೌಲ್ಯಗಳು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಗೆ ಸ್ಫೂರ್ತಿಯಾಗಿದೆ. ಸಬ್ಕಾ ವಿಶ್ವಾಸ್ , ಸಬ್ಕಾ ಪ್ರಾರ್ಥನೆಗೆ ಆಧಾರವಾಗಿವೆ” ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

Advertisement

ಎಂದು ದೀಪೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು  ಆಗಮಿಸಿದ ಪ್ರಧಾನಿ, ರಾಮ್ ಕಥಾ ಪಾರ್ಕ್‌ನಲ್ಲಿ ಭಗವಾನ್ ರಾಮ ಮತ್ತು ಸೀತೆಯ ಸಾಂಕೇತಿಕ ಪಟ್ಟಾಭಿಷೇಕವನ್ನು ನೆರವೇರಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅವರ ಆಶೀರ್ವಾದದಿಂದಾಗಿ ದೇವರ ದರ್ಶನ ಪಡೆಯುವ ಅವಕಾಶ ಸಿಕ್ಕಿತು. ಅಯೋಧ್ಯೆ, ಇಡೀ ಯುಪಿ ಮತ್ತು ಪ್ರಪಂಚದ ಜನರು ಈ ಘಟನೆಗೆ ಸಾಕ್ಷಿಯಾಗುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ. ನಾವು ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿರುವಾಗ, ಭಗವಾನ್ ರಾಮನಂತಹ ಸಂಕಲ್ಪವು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ” ಎಂದರು.

ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಹಾತೊರೆಯುವ ಜನರಿಗೆ ಭಗವಾನ್ ರಾಮನ ಆದರ್ಶಗಳು ಬೆಳಕಿನ ದಾರಿ ಮತ್ತು ಅತ್ಯಂತ ಕಷ್ಟಕರವಾದ ಗುರಿಗಳನ್ನು ಸಾಧಿಸಲು ಧೈರ್ಯ ನೀಡುತ್ತವೆ ಎಂದರು.

ಆಗಸ್ಟ್ 5, 2020 ರಂದು ರಾಮ ಮಂದಿರ ನಿರ್ಮಾಣಕ್ಕಾಗಿ “ಭೂಮಿ ಪೂಜೆ” ನಂತರ ಅಯೋಧ್ಯೆಗೆ ಇದು ಅವರ ಮೊದಲ ಭೇಟಿಯಾಗಿದೆ.

ದೀಪೋತ್ಸವ ಆಚರಣೆಗಾಗಿ ಅಯೋಧ್ಯೆ ತಲುಪಿದ ತಕ್ಷಣ ಪ್ರಧಾನಿಯವರು ತಾತ್ಕಾಲಿಕ ರಾಮಮಂದಿರಕ್ಕೆ ತೆರಳಿ ರಾಮಲಲ್ಲಾಗೆ ಪ್ರಾರ್ಥನೆ ಸಲ್ಲಿಸಿದರು. ಅವರು ಅಲ್ಲಿ ಮಣ್ಣಿನ ದೀಪವನ್ನು ಬೆಳಗಿಸಿದರು ಮತ್ತು ಆರತಿ ಮಾಡಿದರು. ಸ್ಥಳದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣದ ಬಗ್ಗೆ ಅಧಿಕಾರಿಗಳು  ಅವರಿಗೆ ಮಾಹಿತಿ ನೀಡಿದರು.ಇದಕ್ಕೂ ಮುನ್ನ ಪ್ರಧಾನಿ ಅವರನ್ನು ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದರು.

Advertisement

ದೀಪೋತ್ಸವದಲ್ಲಿ ಸುಮಾರು 18 ಲಕ್ಷ ಮಣ್ಣಿನ ಹಣತೆಗಳ ದೀಪಗಳನ್ನು ಬೆಳಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next