Advertisement

Valmiki ನಿಗಮ ಅಕ್ರಮಕ್ಕೆ ಮೇಲಿನಿಂದ ಒತ್ತಡ ಕಾರಣ?

12:21 AM Jul 10, 2024 | Team Udayavani |

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅಕ್ರಮಕ್ಕೆ “ಮೇಲಿನಿಂದ’ ಒತ್ತಡ ಕಾರಣವೇ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಕಾರಣ ಹಗರಣಕ್ಕೆ ಸಂಬಂಧಿಸಿ ಎಸ್‌ಐಟಿ ಬಲೆಗೆ ಬಿದ್ದಿರುವ ಲೆಕ್ಕ ಪರಿಶೋಧಕ ಪರಶುರಾಮ್‌ ಮತ್ತು ನಿಗಮದ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್‌ ನಡುವೆ ನಡೆದಿರುವುದು ಎನ್ನಲಾದ ಮಾತುಕತೆಯ ಆಡಿಯೋ.

Advertisement

ನಿಗಮದ ಅಧಿಕಾರಿ, ಶಿವಮೊಗ್ಗದ ಚಂದ್ರಶೇಖರ್‌ ಸಾವಿಗೂ 2 ದಿನ ಮುಂಚೆ ಪದ್ಮನಾಭ್‌ ಬೆಂಗಳೂರಿನ ಹೊಟೇಲ್‌ ಒಂದರಲ್ಲಿ ಲೆಕ್ಕ ಪರಿಶೋಧಕ ಪರಶುರಾಮ್‌ ಅವರನ್ನು ಕರೆಸಿಕೊಂಡು ಗೌಪ್ಯ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಈ ಮಾತುಕತೆಯ ಆಡಿಯೋ ವೈರಲ್‌ ಆಗಿದೆ. ಆಡಿಯೋದಲ್ಲಿ, “ಮಿನಿಸ್ಟರ್‌ ಆಫೀಸಿನಿಂದ ಹೇಳಿದ್ರು’, “ನಾಗರಾಜ್‌ (ನೆಕ್ಕುಂಟಿ ನಾಗರಾಜ…) ಕಡೆಯಿಂದ ಪ್ರಶರ್‌ ಬಂತು’ ಎಂಬೆಲ್ಲ ಮಾತುಗಳು ಇದ್ದು, ಅನುಮಾನಕ್ಕೀಡು ಮಾಡಿವೆ.

ವೈರಲ್‌ ಆದ ಆಡಿಯೋದಲ್ಲಿ ಏನಿದೆ?
ಪದ್ಮನಾಭ್‌: ಕ್ಯಾಶ್‌ ಬುಕ್‌ ನೋಡಬೇಕೆಂದು ಯಾರು ಕರೆ ಮಾಡಿದ್ದು, ಏನಂತೆ?
ಪರಶುರಾಮ್‌: ಸುನಿಲ್‌. 2 ಕೋಟಿ ಬಂದಿದೆ ಎಂದರು ಸರ್‌ ಮೇಡಂ. ನಕ್ಕುಂಟಿ ನಾಗರಾಜ್‌ ಕಡೆಯವರನ್ನು ನಮ್ಮ ಮುಂದೆ ಮಾಡುತ್ತಾರೆ ಎಂದು ಏನು ಗ್ಯಾರಂಟಿ? ನಿಮ್ಮ ಸಂಪರ್ಕದಲ್ಲಿ ಯಾರಿದ್ದಾರೆ ಸರ್‌?
ಪದ್ಮನಾಭ್‌: ಅದೇ ನಾಗರಾಜ್‌ ಬಾಮೈದ.
ಪರಶುರಾಮ್‌: ನಾನ್‌ ಅವತ್ತೆ ಹೇಳಿದ್ದೆ ಸರ್‌ ಬೇಡ ಅಂತಾ.
ಪದ್ಮನಾಭ್‌: ನಾವು ಅದನ್ನ ಹೇಳಲೇಬಾರದು, ಮಿನಿಸ್ಟರ್‌ ಆಫೀಸಿನಿಂದ ಹೇಳಿದ್ರು, ನಾಗರಾಜ್‌ (ನೆಕ್ಕುಂಟಿ ನಾಗರಾಜ…) ಕಡೆ
ಯಿಂದ ಪ್ರಶರ್‌ ಬಂತು. ನಾವು ಇದ್ದ ಅಕೌಂಟ್‌ ಟ್ರಾನ್ಸ್‌ಫ‌ರ್‌ ಮಾಡಿ ಕೊಟ್ಟಿದ್ದೇವೆ. ಎಲ್ಲ ಫೇಕ್‌ ಸಿಗ್ನೇಚರ್‌ ಎಂಬುದು ನಿಜಾನಾ? ದುಡ್ಡು ಬಂದ ಮೇಲೆ ಆ್ಯಕ್ಷನ್‌ ತೆಗೆದುಕೊಳ್ಳೋಣ.
ಪರಶುರಾಮ್‌: ಪ್ರಾಬ್ಲಿಂ ಆಗತ್ತೆ ಸರ್‌, ಬ್ಯಾಂಕಿನವರು ಕೇಸ್‌ ಮಾಡಿದ್ರೆ, ನಮ್ಮ ದುಡ್ಡು ನಮಗೆ ಕೊಡುತ್ತಾರಾ ಅವರು ಅಂತಾ?
ಪದ್ಮನಾಭ್‌: ಈಗ ಅಧ್ಯಕ್ಷರಿಗೆ ಹೇಳ್ಳೋದಾ ಬೇಡ್ವಾ? ಅಧ್ಯಕ್ಷರಿಗೆ ಹೇಳಿದರೆ ದೊಡ್ಡ ರಾದ್ಧಾಂತ ಮಾಡುತ್ತಾರೆ. ಸೋಮವಾರ ಮಂಗಳವಾರ, ಬುಧವಾರ 3 ದಿನ ಬಿಡೋಣ. ಇವತ್ತು ಒಂದು ದಿನ ಮ್ಯಾನೇಜ್‌ ಮಾಡಿ ಕಳಿಸಿ. ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದ ಅಕೌಂಟು ತೋರಿ ಸದೇ ಮ್ಯಾನೇಜ್‌ ಮಾಡೋಕಾಗಲ್ವಾ?
ಪರಶುರಾಮ್‌: ಈಗ ಎಲ್ಲವೂ ಗೊತ್ತಾಗುತ್ತಲ್ವ ಸರ್‌. ಮಾಡಬಹುದು ಸರ್‌.
ಪದ್ಮನಾಭ್‌: ಗೊತ್ತಾಗದಂತೆ, ಈಗಿರುವ ಅಮೌಂಟ್‌ಗೆ ಲೆಟರ್‌ ಕೊಟ್ಟು ಬೇರೆ ಅಕೌಂಟ್‌ಗೆ ಟ್ರಾನ್ಸ್‌ಫ‌ರ್‌ ಮಾಡುವುದು.
ಪದ್ಮನಾಭ: ಚಂದ್ರಶೇಖರನ್‌ ಎಲ್ಲವನ್ನೂ ಸ್ಟೇಟ್ಮೆಂಟ್ ತರಿಸುವವನು ಮಾ. 31ಕ್ಕೆ ಇದನ್ನ ಯಾಕೆ ತರಿಸಿಲ್ಲ? ಚೆಕ್‌ಬುಕ್‌ ಬಂದಿಲ್ಲ ಎಂದು ಏಕೆ ಕೇಳಿಲ್ಲ.
ಪರಶುರಾಮ್‌: ಅವನದ್ದೂ ತಪ್ಪಿದೆ ಸರ್‌, ಅವನು ಭಾಗಿಯಾಗಿದ್ದಾನೋ, ನೆಗ್ಲಿಜಿನ್ಸಿನೋ ಗೊತ್ತಿಲ್ಲ.
ಪದ್ಮನಾಭ:ಮಾಹಿತಿ ಕೊಟ್ಟಿರುತ್ತಾನೆ. ನಮ್ಮದೆಲ್ಲ ಹಿಂದೆ ಇರುತ್ತೆ ಅಂತಾ ಕೊಟ್ಟವರು ಯಾರು?
ಪರಶುರಾಮ್‌: ಎಲ್ಲ ಖಾತೆ ಕ್ಲೋಜ್‌ ಮಾಡಿ ಖಜಾನೆಗೆ ಹಾಕಬಹುದು ಸರ್‌.

ಸಚಿವರ ಹೆಸರು ತಳುಕು ?
ಪರಶುರಾಮ್‌:
ನಕ್ಕುಂಟೆ ನಾಗರಾಜ್‌ ಅಕೌಂಟ್‌ ಓಪನ್‌ ಮಾಡಿರುವುದು ಮಿನಿಸ್ಟರ್‌ ಗಮನಕ್ಕಿಲ್ವ ಸರ್‌?
ಪದ್ಮನಾಭ್‌: ಅದು ಗೊತ್ತು ಅವರಿಗೆ. ಅವರೇ ಅಲ್ವ ಕರೆಸಿ ಮಾತನಾಡಿಸಿದ್ದು. ನಿನ್ನೆಯೂ ಅಕೌಂಟ್‌ ಟ್ರಾನ್ಸ್‌ಫ‌ರ್‌ಗೆ ಕರೆ ಮಾಡಿದ್ದರಲ್ಲ.
ಪರಶುರಾಮ್‌: 5 ಕೋಟಿ ಹಾಕಿದ್ದರು ಅವರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next